ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಬಿಐ ನೌಕರರ ಮುಷ್ಕರ ಅಂತ್ಯ: ಪಿಂಚಣಿಯಲ್ಲಿ ಹೆಚ್ಚಳ

By Staff
|
Google Oneindia Kannada News

ಎಸ್‌ಬಿಐ ನೌಕರರ ಮುಷ್ಕರ ಅಂತ್ಯ: ಪಿಂಚಣಿಯಲ್ಲಿ ಹೆಚ್ಚಳ
ಫಲಕಾರಿಯಾದ ಮಾತುಕತೆ, ಸೋಮವಾರದಿಂದ ಬ್ಯಾಂಕ್‌ ಕಾರ್ಯಾರಂಭ

ನವದೆಹಲಿ : ಎಸ್‌ಬಿಐ ನೌಕರರ ಪಿಂಚಣಿ ಹೆಚ್ಚಿಸಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದು, ಕಳೆದ ಏಳು ದಿನಗಳಿಂದ ನಡೆಯುತ್ತಿದ್ದ ಮುಷ್ಕರ ಅಂತ್ಯಗೊಂಡಿದೆ.

ನೌಕರರ ಒಕ್ಕೂಟ ಹಾಗೂ ಬ್ಯಾಂಕ್‌ ಆಡಳಿತ ಮಂಡಳಿ ಜೊತೆ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಭಾನುವಾರ ನಡೆಸಿದ ಮಾತುಕತೆ ಫಲಕಾರಿಯಾಗಿದೆ. ಹಾಗಾಗಿ, ಸೋಮವಾರ(ಏಪ್ರಿಲ್‌ 10)ದಿಂದ ಎಸ್‌ಬಿಐ ನೌಕರರು ಕೆಲಸಕ್ಕೆ ಹಾಜರಾಗಲಿದ್ದು, ಎಂದಿನಂತೆ ಎಸ್‌ಬಿಐ ಕಾರ್ಯನಿರ್ವಹಿಸಲಿದೆ.

ಕೊನೆಯ ತಿಂಗಳ ವೇತನವಾಗಿ ರೂ.21,040ಕ್ಕಿಂತ ಕಡಿಮೆ ಪಡೆಯುವ ನೌಕರರು, ವೇತನದ ಶೇ. 50ರಷ್ಟು ಪಿಂಚಣಿ ಪಡೆಯಲಿದ್ದಾರೆ. ಇದಕ್ಕಿಂತ ಹೆಚ್ಚು ವೇತನ ಪಡೆಯುವ ನೌಕರರು ಶೇ. 40ರಷ್ಟು ಪಿಂಚಣಿ ಪಡೆಯಲಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X