ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಬೇಡ : ಬಂಡಾಯಿಗಳ ಅಪಸ್ವರ

By Staff
|
Google Oneindia Kannada News

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಬೇಡ : ಬಂಡಾಯಿಗಳ ಅಪಸ್ವರ
14ನೇ ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನಕ್ಕೆ ತೆರೆ, ದೇಶಭಾಷೆಗಳ ಅಭಿವೃದ್ಧಿಗೆ ಕರೆ

ಶಿವಮೊಗ್ಗ : ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಬೇಕು-ಬೇಡ ಎಂಬ ಚರ್ಚೆ ಮುಂದುವರೆದಿದ್ದು, ಇದೀಗ ಬಂಡಾಯ ಸಾಹಿತಿಗಳು ಬೇಡ ಎಂಬ ಕೂಗು ಹಾಕಿದ್ದಾರೆ.

ಭಾನುವಾರ ಮುಕ್ತಾಯವಾದ 14ನೇ ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನದಲ್ಲಿ ಈ ಕೂಗು ಕೇಳಿ ಬಂದಿದೆ. ಶಾಸ್ತ್ರೀಯ ಭಾಷೆ ಎಂಬ ಪರಿಕಲ್ಪನೆಯೇ ಅವೈಜ್ಞಾನಿಕ. ಯಾವುದೇ ಭಾಷೆಗೆ ಈ ಸ್ಥಾನಮಾನ ನೀಡುವ ಬದಲು, ಎಲ್ಲ ಭಾರತೀಯ ಭಾಷೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹಣ ಮೀಸಲಿರಿಸಬೇಕು ಎಂಬ ಅಭಿಪ್ರಾಯ ಇಲ್ಲಿ ವ್ಯಕ್ತವಾಗಿದೆ.

ಭಾರತೀಯ ಸಂವಿಧಾನದ 344 ಹಾಗೂ 350ನೇ ವಿಧಿಯ, 8ನೇ ಪರಿಚ್ಛೇದದ ಅನುಸಾರ, ಹಿಂದಿ ಭಾಷೆಗೆ ನೀಡಿರುವ ಸೌಲಭ್ಯಗಳನ್ನು ಎಲ್ಲ ಭಾರತೀಯ ಭಾಷೆಗಳಿಗೂ ನೀಡಬೇಕು ಎಂಬ ನಿರ್ಣಯ ಸೇರಿದಂತೆ, ಸಮ್ಮೇಳನದ 8 ಗೊತ್ತುವಳಿಗಳನ್ನು ಸಮಿತಿ ಸಂಚಾಲಕ ಕೆ.ಎಚ್‌.ಶರೀಫ್‌ ಓದಿದರು.

ಶನಿವಾರ ಆರಂಭವಾದ ಸಮ್ಮೇಳನವನ್ನು ಮರಾಠಿ ಲೇಖಕ ಲಕ್ಷ್ಮಣ್‌ ಗಾಯಕ್‌ವಾಡ್‌ ಉದ್ಘಾಟಿಸಿದ್ದರು. ಸಮ್ಮೇಳನದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

ಸಾಹಿತ್ಯವಲಯದ ಒಂದು ಗುಂಪು ಹಾಗೂ ರಾಜ್ಯ ಸರ್ಕಾರ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಪಡೆಯಲು ಕಸರತ್ತು ನಡೆಸಿರುವಾಗಲೇ ಬಂಡಾಯ ಸಾಹಿತ್ಯ ಸಮ್ಮೇಳನದಲ್ಲಿ ಇದಕ್ಕೆ ತದಿರುದ್ಧ ಧ್ವನಿ ಕೇಳಿ ಬಂದಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X