ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಬೇಡ : ಬಂಡಾಯಿಗಳ ಅಪಸ್ವರ
ಕನ್ನಡಕ್ಕೆ
ಶಾಸ್ತ್ರೀಯ
ಸ್ಥಾನ
ಬೇಡ
:
ಬಂಡಾಯಿಗಳ
ಅಪಸ್ವರ
14ನೇ
ರಾಜ್ಯ
ಬಂಡಾಯ
ಸಾಹಿತ್ಯ
ಸಮ್ಮೇಳನಕ್ಕೆ
ತೆರೆ,
ದೇಶಭಾಷೆಗಳ
ಅಭಿವೃದ್ಧಿಗೆ
ಕರೆ
ಭಾನುವಾರ ಮುಕ್ತಾಯವಾದ 14ನೇ ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನದಲ್ಲಿ ಈ ಕೂಗು ಕೇಳಿ ಬಂದಿದೆ. ಶಾಸ್ತ್ರೀಯ ಭಾಷೆ ಎಂಬ ಪರಿಕಲ್ಪನೆಯೇ ಅವೈಜ್ಞಾನಿಕ. ಯಾವುದೇ ಭಾಷೆಗೆ ಈ ಸ್ಥಾನಮಾನ ನೀಡುವ ಬದಲು, ಎಲ್ಲ ಭಾರತೀಯ ಭಾಷೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹಣ ಮೀಸಲಿರಿಸಬೇಕು ಎಂಬ ಅಭಿಪ್ರಾಯ ಇಲ್ಲಿ ವ್ಯಕ್ತವಾಗಿದೆ.
ಭಾರತೀಯ ಸಂವಿಧಾನದ 344 ಹಾಗೂ 350ನೇ ವಿಧಿಯ, 8ನೇ ಪರಿಚ್ಛೇದದ ಅನುಸಾರ, ಹಿಂದಿ ಭಾಷೆಗೆ ನೀಡಿರುವ ಸೌಲಭ್ಯಗಳನ್ನು ಎಲ್ಲ ಭಾರತೀಯ ಭಾಷೆಗಳಿಗೂ ನೀಡಬೇಕು ಎಂಬ ನಿರ್ಣಯ ಸೇರಿದಂತೆ, ಸಮ್ಮೇಳನದ 8 ಗೊತ್ತುವಳಿಗಳನ್ನು ಸಮಿತಿ ಸಂಚಾಲಕ ಕೆ.ಎಚ್.ಶರೀಫ್ ಓದಿದರು.
ಶನಿವಾರ ಆರಂಭವಾದ ಸಮ್ಮೇಳನವನ್ನು ಮರಾಠಿ ಲೇಖಕ ಲಕ್ಷ್ಮಣ್ ಗಾಯಕ್ವಾಡ್ ಉದ್ಘಾಟಿಸಿದ್ದರು. ಸಮ್ಮೇಳನದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಸಾಹಿತ್ಯವಲಯದ ಒಂದು ಗುಂಪು ಹಾಗೂ ರಾಜ್ಯ ಸರ್ಕಾರ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಪಡೆಯಲು ಕಸರತ್ತು ನಡೆಸಿರುವಾಗಲೇ ಬಂಡಾಯ ಸಾಹಿತ್ಯ ಸಮ್ಮೇಳನದಲ್ಲಿ ಇದಕ್ಕೆ ತದಿರುದ್ಧ ಧ್ವನಿ ಕೇಳಿ ಬಂದಿದೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು