ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆಂಕಟಾಚಲರ ಬಲೆಯಲ್ಲಿ ಮತ್ತೊಬ್ಬ ಲಕ್ಷ್ಮಿಪುತ್ರ ಲಕ್ಷ್ಮಣ

By Staff
|
Google Oneindia Kannada News

ವೆಂಕಟಾಚಲರ ಬಲೆಯಲ್ಲಿ ಮತ್ತೊಬ್ಬ ಲಕ್ಷ್ಮಿಪುತ್ರ ಲಕ್ಷ್ಮಣ
27ವರ್ಷದಲ್ಲಿ 12ಕೋಟಿ ಸಂಪಾದಿಸುವ ಬ್ರಹ್ಮರಹಸ್ಯ ಲೋಕಾಯುಕ್ತರಿಂದ ಬಯಲಿಗೆ...

ಬೆಂಗಳೂರು : ಮೈಸೂರು ಮಿನರಲ್ಸ್‌ ಲಿಮಿಟೆಡ್‌ನ ಪ್ರಧಾನ ವ್ಯವಸ್ಥಾಪಕ ಬಿ.ಟಿ.ಲಕ್ಷ್ಮಣ್‌ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಹನ್ನೆರಡು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆಹಚ್ಚಲಾಗಿದೆ.

ಗುರುವಾರ ನಡೆದ ದಾಳಿ ಸಂದರ್ಭದಲ್ಲಿ, ಒಂದು ಲಕ್ಷ ರೂಪಾಯಿ ನಗದು, ಒಂದೂವರೆ ಕಿಲೋಗ್ರಾಂ ಚಿನ್ನಾಭರಣ, ಎಂಟು ಕಿಲೋಗ್ರಾಂ ಬೆಳ್ಳಿ ಸಾಮಾನು, ವಿವಿಧ ಬ್ಯಾಂಕುಗಳ ಪಾಸ್‌ಬುಕ್‌, ವಿವಿಧ ಉಳಿತಾಯ ಬಾಂಡುಗಳು ಹಾಗೂ ಇನ್ನಿತರ ಮಹತ್ವ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಸ್ತುತ ಲಕ್ಷಣ್‌ ವಾಸಿಸುತ್ತಿರುವ, ದಾಳಿನಡೆಸಲಾಗಿರುವ ಆರ್‌ಪಿಸಿ ಲೇಔಟ್‌ನ ಮನೆಯೇ 2 ಕೋಟಿ ರೂಪಾಯಿ ಮೌಲ್ಯದ್ದು ಎಂದು ಲೋಕಾಯುಕ್ತ ವೆಂಕಟಾಚಲ ಅಂದಾಜು ಮಾಡಿದ್ದಾರೆ.

ಚಂದ್ರಾ ಲೇಔಟ್‌ನಲ್ಲಿ ಲಕ್ಷ್ಮಣ್‌ಸುಮಾರು ನಾಲ್ಕು ಕೋಟಿ ರೂಪಾಯಿ ಮೌಲ್ಯದ ವಾಣಿಜ್ಯ ಸಂಕೀರ್ಣವಿದ್ದು, ನಗರದ ವಿವಿಧ ಪ್ರದೇಶಗಳಲ್ಲಿ ಸುಮಾರು ಐದು ಕೋಟಿ ರೂಪಾಯಿ ಬೆಲೆಬಾಳುವ ಮನೆ ಹಾಗೂ ನಿವೇಶನಗಳನ್ನು ಹೊಂದಿರುವುದು ದಾಳಿ ಸಂದರ್ಭದಲ್ಲಿ ಬಯಲಾಗಿದೆ.

ಭ್ರಷ್ಟತೆ : ಬಡ ಕುಟುಂಬದಿಂದ ಬಂದ ಲಕ್ಷ್ಮಣ ಕೆಲಸಕ್ಕೆ ಸೇರಿದಾಗ ಅವರ ಸಂಬಳ ಕೇವಲ 100ರೂ ಆಗಿತ್ತು. ಈಗ ಅವರ ಸಂಬಳ 18ಸಾವಿರ ರೂ. ಆಗಿದೆ. ತಮ್ಮ 27ವರ್ಷಗಳ ಸೇವಾವಧಿಯಲ್ಲಿ ಲಕ್ಷ್ಣಣ್‌ ಹತ್ತಾರುಕೋಟಿ ರೂಪಾಯಿಗಳ ಆಸ್ತಿ ಸಂಪಾದಿಸಿದ್ದು ಹೇಗೆ ಎಂಬುದು ಬ್ರಹ್ಮ ರಹಸ್ಯ.

(ಏಜೆನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X