ರಾಷ್ಟ್ರಪತಿ ಅಬ್ದುಲ್ ಕಲಾಂ ಆಗಮನ : ಪ್ರವಾಸದ ವಿವರ
ರಾಷ್ಟ್ರಪತಿ
ಅಬ್ದುಲ್
ಕಲಾಂ
ಆಗಮನ
:
ಪ್ರವಾಸದ
ವಿವರ
ಸಿದ್ದಗಂಗಾ
ಶ್ರೀಗಳ
ಜನ್ಮಶತಮಾನೋತ್ಸವದಲ್ಲಿ
ಅಬ್ದುಲ್
ಕಲಾಂ
ಉಪಸ್ಥಿತಿ
ಶುಕ್ರವಾರ ಬೆಳಗ್ಗೆ 10.30ಕ್ಕೆ ತುಮಕೂರಿನಲ್ಲಿ ನಡೆಯಲಿರುವ ಶ್ರೀ ಸಿದ್ದಗಂಗಾ ಶ್ರೀಗಳಾದ ಶ್ರೀ ಶಿವಕುಮಾರ ಸ್ವಾಮೀಜಿ ಅವರ 99ನೇ ಜನ್ಮದಿನೋತ್ಸವ ಮತ್ತು ಗುರು ವಂದನಾ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.
ಈ ಕಾರ್ಯಕ್ರಮ ಮುಗಿಸಿಕೊಂಡು ತುಮಕೂರಿನಿಂದ ಮಡಿಕೇರಿಗೆ ತೆರಳಲಿರುವ ಕಲಾಂ, ಅಲ್ಲಿ ಕೊಡಗಿನ ವೀರ ಸೇನಾನಿ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸುವರು.
ಸಂಜೆ ವೇಳೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸಲಿರುವ ರಾಷ್ಟ್ರಪತಿ ಕಲಾಂ, ಸಂಜೆ 5ಗಂಟೆಗೆ ನಡೆಯಲಿರುವ ಹೈಕೋರ್ಟ್ನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಅದಕ್ಕೂ ಮುನ್ನ ಸೆಂಟ್ರಲ್ ಕಾಲೇಜಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ವಿದ್ಯಾರ್ಥಿಗಳ ಜೊತೆ ಎರಡು ಗಂಟೆ ಸಂವಾದ ನಡೆಸುವರು. ನಂತರ ರಾತ್ರಿ 8.30ಕ್ಕೆ ದೆಹಲಿಗೆ ಪ್ರಯಣ ಬೆಳೆಸುವರು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು