ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಕ್ರಿಕೆಟ್‌ ತಂಡಕ್ಕೆ ಕರ್ನಾಟಕದ ರಾಬಿನ್‌ ಸೇರ್ಪಡೆ

By Staff
|
Google Oneindia Kannada News

ಭಾರತ ಕ್ರಿಕೆಟ್‌ ತಂಡಕ್ಕೆ ಕರ್ನಾಟಕದ ರಾಬಿನ್‌ ಸೇರ್ಪಡೆ
ಕೊನೆಗೂ ಪ್ರತಿಭೆಗೆ ಮನ್ನಣೆ, ರಾಜ್ಯಾದ್ಯಂತ ಸಂಭ್ರಮದ ವಾತಾವರಣ

ಬೆಂಗಳೂರು : ಭಾರತೀಯ ಕ್ರಿಕೆಟ್‌ ತಂಡಕ್ಕೆ ಕರ್ನಾಟಕದ ವಿಶಿಷ್ಟ ಶೈಲಿಯ ಬ್ಯಾಟ್ಸ್‌ಮನ್‌ ರಾಬಿನ್‌ ಉತ್ತಪ್ಪ ಆಯ್ಕೆಯಾಗಿದ್ದಾರೆ.

ಇಂಗ್ಲೆಡ್‌ ವಿರುದ್ಧ ಬಾಕಿ ಇರುವ ನಾಲ್ಕು ಏಕದಿನ ಪಂದ್ಯಗಳು ಹಾಗೂ ಹಾಗೂ ಪಾಕಿಸ್ತಾನದ ವಿರುದ್ಧ ಅಬುಧಾಬಿಯಲ್ಲಿ ನಡೆಯಲಿರುವ ಎರಡು ಏಕದಿನ ಪಂದ್ಯಗಳಿಗಾಗಿ ಪ್ರಕಟಿಸಲಾಗಿರುವ 15 ಆಟಗಾರರ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಗೌತಮ್‌ ಗಂಭೀರ್‌ ಬದಲಿಗೆ ರಾಬಿನ್‌ ಉತ್ತಪ್ಪ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಭಾರತೀಯ ಕ್ರಿಕೆಟ್‌ ತಂಡದಲ್ಲಿ ಕೆಲವು ಸಲ ಅರ್ಧಕ್ಕೂ ಹೆಚ್ಚು ತಂಡ ಕರ್ನಾಟಕದ್ದೇ ಆಗಿರುತ್ತಿತ್ತು. ಆದರೆ ಇತ್ತೀಚೆಗೆ ಕರ್ನಾಟಕ ಆಟಗಾರಿಗೆ ಅವಕಾಶವೇ ಸಿಗುತ್ತಿಲ್ಲ ಎಂಬ ಮಾತೂ ಕೇಳಿ ಬಂದಿತ್ತು. ರಾಬಿನ್‌ ಆಯ್ಕೆ ಅವರ ಕುಟುಂಬ ವರ್ಗ ಹಾಗೂ ನಾಡಿನ ಜನತೆಯಲ್ಲಿ ಅಪಾರ ಹರ್ಷ ಉಂಟುಮಾಡಿದೆ.

20 ವರ್ಷದ ಪ್ರತಿಭಾವಂತ ಬಲಗೈ ಬ್ಯಾಟ್ಸ್‌ಮನ್‌ ಹಾಗೂ ವಿಕೆಟ್‌ ಕೀಪಿಂಗ್‌ ಕೂಡ ಮಾಡಬಲ್ಲ ರಾಬಿನ್‌ ಕರ್ನಾಟಕ ರಣಜಿ ತಂಡದ ನಾಯಕರೂ ಹೌದು. ರಣಜಿ, ದುಲೀಪ್‌, ಚಾಲೆಂಜರ್‌ ಟ್ರೋಫಿ ಹಾಗೂ ಎಂಆರ್‌ಎಫ್‌ ಪಂದ್ಯಾವಳಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಅವರು ಇದಕ್ಕೂ ಮೊದಲೇ ಭಾರತೀಯ ತಂಡ ಸೇರಬೇಕಿತ್ತು ಎಂಬ ಮಾತೂ ಚಲಾವಣೆಯಲ್ಲಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X