ನಾನು ಚುನಾವಣೆಯಲ್ಲಿ ಸೋತು ಗೆದ್ದಿದ್ದೇನೆ-ಅನಂತಮೂರ್ತಿ
ನಾನು
ಚುನಾವಣೆಯಲ್ಲಿ
ಸೋತು
ಗೆದ್ದಿದ್ದೇನೆ-ಅನಂತಮೂರ್ತಿ
ನಿರೀಕ್ಷಿತ
ಫಲಿತಾಂಶ,
ಮತ್ತೆ
ರಾಜ್ಯಸಭೆಯತ್ತ
ರಾಜಶೇಖರಮೂರ್ತಿ
ಉದ್ಯಮಿ ರಾಜೀವ್ ಚಂದ್ರಶೇಖರ್ 53 ಮತ ಪಡೆದು ಗೆಲುವು ಸಾಧಿಸಿದರೆ, ಡಾ.ಅನಂತಮೂರ್ತಿ 24 ಮತಪಡೆದು ಪರಾಭವಗೊಂಡರು. ಇವರಿಬ್ಬರ ಸ್ಪರ್ಧೆ ತೀವ್ರ ಚರ್ಚೆಗೆ ಕಾರಣವಾಗಿತ್ತು.
ವಿವರ : 224 ಸದಸ್ಯ ಬಲದ ವಿಧಾನಸಭೆಯಲ್ಲಿ 223 ಮಂದಿ ಮತ ಚಲಾಯಿಸಿದರು. ಕಾಂಗ್ರೆಸ್ನ ಅಧಿಕೃತ ಅಭ್ಯರ್ಥಿ ಕೆ.ರೆಹಮಾನ್ ಖಾನ್ 49ಮತಗಳನ್ನು, ಜೆಡಿಎಸ್ನ ಎಂ.ರಾಜಶೇಖರ ಮೂರ್ತಿ 50ಮತಗಳನ್ನು, ಬಿಜೆಪಿಯ ಕೆ.ಬಿ.ಶಾಣಪ್ಪ 47ಮತಗಳನ್ನು ಪಡೆಯುವ ಮೂಲಕ ರಾಜ್ಯಸಭಾ ಸದಸ್ಯರಾಗಿ ವಿಜೇತರಾದರು.
ಡಾ.ಅನಂತಮೂರ್ತಿ ಪ್ರತಿಕ್ರಿಯೆ : ಸೋಲು ನಿರೀಕ್ಷಿತವೇ ಆಗಿತ್ತು. ಇದು ಕೇವಲ ಚುನಾವಣೆ ಅಲ್ಲ, ಚಳವಳಿ. ಈ ಚುನಾವಣೆ ಕನ್ನಡತನದ ವಿಚಾರವಾಗಿ ಹೊಸ ರಾಜಕೀಯ ಪ್ರಜ್ಞೆ ಮೂಡಿಸಿದೆ. ಆ ಮಟ್ಟಿಗೆ ನನ್ನ ಸ್ಪರ್ಧೆ ಫಲ ನೀಡಿದೆ. ನನ್ನ ಚುನಾವಣಾ ಹೋರಾಟವೂ ಮುಂದುವರಿಯಲಿದೆ ಎಂದು ಡಾ.ಅನಂತಮೂರ್ತಿ ಸ್ಪಷ್ಟಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು