ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಚುನಾವಣೆಯಲ್ಲಿ ಸೋತು ಗೆದ್ದಿದ್ದೇನೆ-ಅನಂತಮೂರ್ತಿ

By Staff
|
Google Oneindia Kannada News

ನಾನು ಚುನಾವಣೆಯಲ್ಲಿ ಸೋತು ಗೆದ್ದಿದ್ದೇನೆ-ಅನಂತಮೂರ್ತಿ
ನಿರೀಕ್ಷಿತ ಫಲಿತಾಂಶ, ಮತ್ತೆ ರಾಜ್ಯಸಭೆಯತ್ತ ರಾಜಶೇಖರಮೂರ್ತಿ

ಬೆಂಗಳೂರು : ಭಾರೀ ಕುತೂಹಲ ಕೆರಳಿಸಿದ್ದ ರಾಜ್ಯಸಭಾ ಚುನಾವಣೆಯಲ್ಲಿ, ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಯು.ಆರ್‌.ಅನಂತಮೂರ್ತಿ ಸೋತಿದ್ದಾರೆ.

ಉದ್ಯಮಿ ರಾಜೀವ್‌ ಚಂದ್ರಶೇಖರ್‌ 53 ಮತ ಪಡೆದು ಗೆಲುವು ಸಾಧಿಸಿದರೆ, ಡಾ.ಅನಂತಮೂರ್ತಿ 24 ಮತಪಡೆದು ಪರಾಭವಗೊಂಡರು. ಇವರಿಬ್ಬರ ಸ್ಪರ್ಧೆ ತೀವ್ರ ಚರ್ಚೆಗೆ ಕಾರಣವಾಗಿತ್ತು.

ವಿವರ : 224 ಸದಸ್ಯ ಬಲದ ವಿಧಾನಸಭೆಯಲ್ಲಿ 223 ಮಂದಿ ಮತ ಚಲಾಯಿಸಿದರು. ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಕೆ.ರೆಹಮಾನ್‌ ಖಾನ್‌ 49ಮತಗಳನ್ನು, ಜೆಡಿಎಸ್‌ನ ಎಂ.ರಾಜಶೇಖರ ಮೂರ್ತಿ 50ಮತಗಳನ್ನು, ಬಿಜೆಪಿಯ ಕೆ.ಬಿ.ಶಾಣಪ್ಪ 47ಮತಗಳನ್ನು ಪಡೆಯುವ ಮೂಲಕ ರಾಜ್ಯಸಭಾ ಸದಸ್ಯರಾಗಿ ವಿಜೇತರಾದರು.

ಡಾ.ಅನಂತಮೂರ್ತಿ ಪ್ರತಿಕ್ರಿಯೆ : ಸೋಲು ನಿರೀಕ್ಷಿತವೇ ಆಗಿತ್ತು. ಇದು ಕೇವಲ ಚುನಾವಣೆ ಅಲ್ಲ, ಚಳವಳಿ. ಈ ಚುನಾವಣೆ ಕನ್ನಡತನದ ವಿಚಾರವಾಗಿ ಹೊಸ ರಾಜಕೀಯ ಪ್ರಜ್ಞೆ ಮೂಡಿಸಿದೆ. ಆ ಮಟ್ಟಿಗೆ ನನ್ನ ಸ್ಪರ್ಧೆ ಫಲ ನೀಡಿದೆ. ನನ್ನ ಚುನಾವಣಾ ಹೋರಾಟವೂ ಮುಂದುವರಿಯಲಿದೆ ಎಂದು ಡಾ.ಅನಂತಮೂರ್ತಿ ಸ್ಪಷ್ಟಪಡಿಸಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X