ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಭಾ ನಂದಕುಮಾರ್‌ ಮಡಿಲಿಗೆ ‘ಕಾಯ್ಕಿಣಿ ಪ್ರಶಸ್ತಿ’

By Staff
|
Google Oneindia Kannada News

ಪ್ರತಿಭಾ ನಂದಕುಮಾರ್‌ ಮಡಿಲಿಗೆ ‘ಕಾಯ್ಕಿಣಿ ಪ್ರಶಸ್ತಿ’
ಕುಮಟಾದಲ್ಲಿ ಏಪ್ರಿಲ್‌ 9ರಂದು ಪ್ರಶಸ್ತಿ ಪ್ರದಾನ ಸಮಾರಂಭ

ಕಾರವಾರ : ಖ್ಯಾತ ಕವಯಿತ್ರಿ ಪ್ರತಿಭಾ ನಂದಕುಮಾರ್‌ 2005ನೇ ಸಾಲಿನ ‘ಕಾಯ್ಕಿಣಿ ಪ್ರಶಸ್ತಿ’ಗೆ ಪಾತ್ರರಾಗಿದ್ದಾರೆ.

ಕುಮಟಾದ ಗೌರೀಶ ಕಾಯ್ಕಿಣಿ ಪ್ರತಿಷ್ಠಾನ ಈ ಪ್ರಶಸ್ತಿ ನೀಡುತ್ತಿದೆ. ಹಿರಿಯ ಕವಿ ಬಿ.ಎ.ಸನದಿ ಅವರ ನೇತೃತ್ವದಲ್ಲಿ ನಡೆದ ಸಮಿತಿ ಸಭೆ, ಪ್ರತಿಭಾ ಹೆಸರನ್ನು ಪ್ರಶಸ್ತಿಗೆ ಪರಿಗಣಿಸಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಎಸ್‌.ಆರ್‌.ನಾರಾಯಣರಾವ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭ ಏಪ್ರಿಲ್‌ 9ರಂದು ಕುಮಟಾದಲ್ಲಿ ನಡೆಯಲಿದೆ. ವಿಮರ್ಶಕ ಪ್ರೊ.ಟಿ.ಪಿ.ಅಶೋಕ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಕನ್ನಡದ ವೈಚಾರಿಕ ಸಾಹಿತ್ಯಕ್ಕೆ ಗೌರೀಶ ಕಾಯ್ಕಿಣಿ ಅವರ ಕೊಡುಗೆ ಗಮನಾರ್ಹವಾದುದು. ಕನ್ನಡದ ಖ್ಯಾತ ಕಥೆಗಾರರಲ್ಲೊಬ್ಬರಾದ ಜಯಂತ ಕಾಯ್ಕಿಣಿ ಗೌರೀಶ ಕಾಯ್ಕಿಣಿ ಅವರ ಮಗ ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X