ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮುಖ್ಯಮಂತ್ರಿ ಸೇರಿದಂತೆ 39 ಶಾಸಕರಿಗೆ ನೋಟಿಸ್ ಜಾರಿ
ಮುಖ್ಯಮಂತ್ರಿ
ಸೇರಿದಂತೆ
39
ಶಾಸಕರಿಗೆ
ನೋಟಿಸ್
ಜಾರಿ
ನ್ಯಾಯಮಂಡಳಿಯಂತೆ
ಕೆಲಸ
ಮಾಡಬೇಕಿದೆ-
ವಿಧಾನಸಭೆ
ಸ್ಪೀಕರ್
ಕೃಷ್ಣ
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸ್ಪೀಕರ್ ಕೃಷ್ಣ, ಈ ವಿಷಯದಲ್ಲಿ ನಾನು ನ್ಯಾಯ ಮಂಡಳಿಯಂತೆ ಕೆಲಸಮಾಡಬೇಕಿದೆ. ಸದ್ಯಕ್ಕೆ ವಿವರಣೆ ಕೋರಿ ನೋಟೀಸ್ ಜಾರಿ ಮಾಡಲಾಗಿದ್ದು, ನಿಯಮಗಳ ಅನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಜಾತ್ಯತೀತ ಜನತಾದಳದಿಂದ ಪ್ರತ್ಯೇಕವಾಗಿ ಗುರುತಿಸಿಕೊಂಡು, ಬಿಜೆಪಿ ಜೊತೆಗೂಡಿ ಸರ್ಕಾರ ರಚಿಸಿರುವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ದಳ 39 ಶಾಸಕರ ಸದಸ್ಯತ್ವ ರದ್ದು ಪಡಿಸಬೇಕು, ಎಂದು ಕೋರಿ ಶಾಸಕ ವಾಟಾಳ್ ನಾಗರಾಜ್ ಮತ್ತಿತರರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಆದರೆ, ಹೈಕೋರ್ಟ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಅವರೇ ಅಂತಿಮ ತೀರ್ಮಾನ ಕೈಗೊಳ್ಳಬೇಕೆಂದು ಹೇಳಿರುವ ಹಿನ್ನೆಲೆಯಲ್ಲಿ, ನೋಟೀಸ್ ಹೊರಡಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ಕುಮಾರ-ಪರ್ವ
Story first published: Friday, March 24, 2006, 23:53 [IST]