ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾದಗ್ರಸ್ತ ಈದ್ಗಾ ಮೈದಾನ, ಇನ್ನು ಮುಂದೆ ಉದ್ಯಾನವನ...

By Staff
|
Google Oneindia Kannada News

ವಿವಾದಗ್ರಸ್ತ ಈದ್ಗಾ ಮೈದಾನ, ಇನ್ನು ಮುಂದೆ ಉದ್ಯಾನವನ...
ಸೌಹಾರ್ದಯುತ ಪರಿಹಾರಕ್ಕೆ ಸಲಹೆ, ಎರಡು ವಾರಗಳ ಗಡುವು

ನವದೆಹಲಿ : ಹುಬ್ಬಳ್ಳಿ ಈದ್ಗಾ ಮೈದಾನ ವಿವಾದ ಶಾಶ್ವತ ಪರಿಹಾರದತ್ತ ಸಾಗಿದ್ದು, ಇನ್ನು ಮುಂದೆ ಅದು ಉದ್ಯಾನವನವಾಗಿ ಕಂಗೊಳಿಸಲಿದೆ.

ಈದ್ಗಾ ಮೈದಾನವನ್ನು ಉದ್ಯಾನವನವಾಗಿ ಪರಿವರ್ತಿಸುವ ಮೂಲಕ ವಿವಾದಕ್ಕೆ ಅಂತ್ಯ ಹಾಡಬೇಕೆಂದು, ರಾಜ್ಯ ಸರ್ಕಾರ ಬುಧವಾರ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿತು. ಮನವಿ ಪತ್ರ ಪರಿಶೀಲಿಸಿದ, ನ್ಯಾಯಮೂರ್ತಿ ಅರುಣ್‌ಕುಮಾರ್‌ ಹಾಗೂ ನ್ಯಾಯಮೂರ್ತಿ ಆರ್‌.ವಿ.ರವೀಂದ್ರನ್‌ ಅವರನ್ನೊಳಗೊಂಡ ಪೀಠ, ಈ ಸಲಹೆಗೆ ಒಪ್ಪಿಗೆ ನೀಡಿತು.

ಮತ್ತಷ್ಟು ಸಲಹೆಗಳನ್ನು ನೀಡಿರುವ ಪೀಠ, ವಿವಾದವನ್ನು ಸೌಹಾರ್ದಯುತವಾಗಿ ಇತ್ಯರ್ಥಗೊಳಿಸಿಕೊಳ್ಳಬೇಕು ಎಂದು ವಾದಿ-ಪ್ರತಿವಾದಿಗಳಿಗೆ ಹೇಳಿದೆ. ಇದಕ್ಕೆ ಎರಡು ವಾರಗಳ ಕಾಲಾವಕಾಶ ನೀಡಿದೆ.

ಮೈದಾನವನ್ನು ಉದ್ಯಾನವನವನ್ನಾಗಿ ಪರಿವರ್ತಿಸುವುದು. ಅಲ್ಲದೆ ಮುಸಲ್ಮಾನರಿಗೆ ವರ್ಷಕ್ಕೆ ಎರಡು ದಿನ ಈದ್‌ ಸಮಯದಲ್ಲಿ ಪ್ರಾರ್ಥನೆಗೆ ವಿಶೇಷ ಅವಕಾಶ ನೀಡುವುದು ಪತ್ರದಲ್ಲಿ ಉಲ್ಲೇಖಗೊಂಡ ಅಂಶಗಳಾಗಿವೆ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಈ ವಿವಾದ ತಾತ್ಕಾಲಿಕ ಪರಿಹಾರ ಕಂಡಿತ್ತು. ಇದೀಗ ಅವರ ಪುತ್ರ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಈ ಅವಧಿಯಲ್ಲಿ ವಿವಾದ ಕಾಯಂ ಪರಿಹಾರ ಕಾಣುವ ಲಕ್ಷಣಗಳು ನಿಚ್ಚಳವಾಗಿವೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X