ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಸಿಕಾ ಕೊಲೆ : 9 ಮಂದಿ ವಿರುದ್ಧ ಜಾಮೀನು ಸಹಿತ ವಾರಂಟ್‌

By Staff
|
Google Oneindia Kannada News

ಜೆಸಿಕಾ ಕೊಲೆ : 9 ಮಂದಿ ವಿರುದ್ಧ ಜಾಮೀನು ಸಹಿತ ವಾರಂಟ್‌
ಪ್ರಕರಣ ಇತ್ಯರ್ಥಗೊಳ್ಳುವರೆಗೂ ದೇಶ ಬಿಟ್ಟು ಹೋಗುವ ಹಾಗಿಲ್ಲ- ನ್ಯಾಯಾಲಯ

ನವದೆಹಲಿ : ಖ್ಯಾತ ರೂಪದರ್ಶಿ ಜೆಸ್ಸಿಕಾ ಲಾಲ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಿಂದ ಖಲಾಸೆಗೊಂಡಿದ್ದ ಒಂಬತ್ತು ಜನರ ವಿರುದ್ಧ ದೆಹಲಿ ಮುಖ್ಯ ನ್ಯಾಯಾಲಯ ಬುಧವಾರ ಜಾಮೀನು ಸಹಿತ ವಾರಂಟ್‌ ಜಾರಿ ಮಾಡಿದೆ.

ಈ ಹಿಂದೆ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದ ಈ ಒಂಬತ್ತು ಜನರು ಮುಂದಿನ ಆದೇಶ ನೀಡುವವರೆಗೂ ದೇಶ ಬಿಟ್ಟು ಹೋಗದಂತೆ ನ್ಯಾಯಮೂರ್ತಿ ಮನಮೋಹನ್‌ ಸರಿನ್‌ ಮತ್ತು ನ್ಯಾಯಮೂರ್ತಿ ಮಂಜು ಗೋಯೆಲ್‌ ನ್ನೊಳಗೊಂಡ ವಿಭಾಗೀಯ ಪೀಠ ಬುಧವಾರ ಆದೇಶಿಸಿದೆ.

ಮನುಶರ್ಮ ಸೇರಿದಂತೆ ಇತರ ಎಲ್ಲರನ್ನೂ ಏಪ್ರಿಲ್‌ 18ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಈ ಪ್ರಕರಣದ ಖುಲಾಸೆಗೊಂಡ ಪೈಕಿ ಒಬ್ಬ ಈಗಾಗಲೆ ಅಮೇರಿಕಾಗೆ ಹೋಗಿರುವ ಹಿನ್ನೆಲೆಯಲ್ಲಿ ಇತರರೂ ಇದೇ ಮಾರ್ಗ ಹಿಡಿಯಬಹುದೆಂಬ ಅನುಮಾನದಿಂದ ಇವರ ವಿರುದ್ಧ ಜಾಮೀನು ರಹಿತ ವಾರೆಂಟ್‌ ಜಾರಿ ಮಾಡುವಂತೆ ಹೆಚ್ಚುವರಿ ಸಾಲಿಟರ್‌ ಗೋಪಾಲ್‌ ಸುಬ್ರಹ್ಮಣಿಮ್‌ ಹಾಗೂ ರಾಜ್ಯದ ಪರ ವಕೀಲ್‌ ಮುಕ್ತಾ ಗುಪ್ತಾ ಅವರು ಕೋರಿದ್ದಕ್ಕೆ, ಪ್ರತಿಯಾಗಿ ನ್ಯಾಯಾಲಯ ಜಾಮೀನು ಸಹಿತ ವಾರಂಟ್‌ ಜಾರಿಮಾಡಿದೆ.

(ದಟ್ಸ್‌ ಕನ್ನಡ ವಾರ್ತೆ)

ಪೂರಕ ಓದಿಗೆ-
ಹಣ, ಅಧಿಕಾರದ ಮುಂದೆ ನ್ಯಾಯದೇವತೆ ಕಣ್ಮುಚ್ಚಿ ನಿಂತಿರುತ್ತಾಳೆ!

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X