ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಸಾಂಬಶಿವಪ್ಪ ಸಾಹಿತ್ಯ ಪುರಸ್ಕಾರ’ಕ್ಕೆ ಕಾದಂಬರಿಗಳ ಆಹ್ವಾನ

By Staff
|
Google Oneindia Kannada News

‘ಸಾಂಬಶಿವಪ್ಪ ಸಾಹಿತ್ಯ ಪುರಸ್ಕಾರ’ಕ್ಕೆ ಕಾದಂಬರಿಗಳ ಆಹ್ವಾನ
ಕಾದಂಬರಿಗಳನ್ನು ಕಳುಹಿಸಲು ಏಪ್ರಿಲ್‌ 15ರಂದು ಕೊನೆ ದಿನ...

ತುಮಕೂರು : ಪ್ರಸಕ್ತ ಸಾಲಿನ ಸಾಂಬಶಿವಪ್ಪ ಸಾಹಿತ್ಯ ಪುರಸ್ಕಾರಕ್ಕೆ ಕಾದಂಬರಿಗಳನ್ನು ಆಹ್ವಾನಿಸಲಾಗಿದೆ.

ಅನನ್ಯ ಪ್ರಕಾಶನದ ಸಂಸ್ಥಾಪಕರಾದ ದಿವಂಗತ ಕೆ. ಸಾಂಬಶಿವಪ್ಪನವರ ನೆನಪಿನಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ.ಪ್ರತಿ ವರ್ಷವೂ ನಿಗದಿ ಮಾಡಿದ ಸಾಹಿತ್ಯ ಪ್ರಕಾರದ ಕೃತಿಗಳನ್ನು ಆಹ್ವಾನಿಸಿ, ಅವುಗಳಲ್ಲಿ ಒಂದನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗುತ್ತದೆ.

ಈ ಪ್ರಶಸ್ತಿಯು ಐದು ಸಾವಿರ ರೂಪಾಯಿ ನಗದು, ಪ್ರಶಸ್ತಿ ಹಾಗೂ ಫಲಕಗಳನ್ನು ಒಳಗೊಂಡಿದೆ. ಪ್ರತಿ ವರ್ಷದ ಮೇ ತಿಂಗಳಿನಲ್ಲಿ ಕಾದಂಬರಿ ವಿಜೇತರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.

2005ನೇ ಸಾಲಿಗೆ ಕಾದಂಬರಿಗಳನ್ನು ಆಹ್ವಾನಿಸಲಾಗಿದ್ದು, ಕೃತಿಯು ಜನವರಿ 1,2005 ರಿಂದ ಡಿಸೆಂಬರ್‌21,2005ರ ಅವಧಿಯಾಳಗೆ ಪ್ರಥಮ ಮುದ್ರಣ ಕಂಡಿರಬೇಕು. ಅನುವಾದ/ ಸಮಗ್ರ / ಸಂಪಾದಿತ ಕೃತಿಗಳನ್ನು ಪರಿಗಣಿಸುವುದಿಲ್ಲ. ಲೇಖಕರು ತಮ್ಮ ಕೃತಿಯ ಮೂರು ಪ್ರತಿಗಳನ್ನು ಕೆಳಕೆಂಡ ವಿಳಾಸಕ್ಕೆ ಏಪ್ರಿಲ್‌15, 2006ರೊಳಗೆ ತಲುಪಿಸಬೇಕಾಗಿ ಕೋರಲಾಗಿದೆ.

ವಿಳಾಸ: ಎಂ.ಸಿ. ಲಲಿತಾ
ಅನನ್ಯ ಪ್ರಕಾಶನ, ನಿಸರ್ಗ ಮುನಿಸಿಪಲ್‌ ಲೇಔಟ್‌,
ಸಿದ್ಧಗಂಗಾ ಬಡಾವಣೆ,
ತುಮಕೂರು- 572102 , ದೂರವಾಣಿ - 0816-2273672, ಮೊಬೈಲ್‌- 9880113462

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X