ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಸಭಾ ಚುನಾವಣೆ : ಪಕ್ಷೇತರರ ನಾಮಪತ್ರ ತಿರಸ್ಕೃತ

By Staff
|
Google Oneindia Kannada News

ರಾಜ್ಯಸಭಾ ಚುನಾವಣೆ : ಪಕ್ಷೇತರರ ನಾಮಪತ್ರ ತಿರಸ್ಕೃತ
ಸೂಚಕರ ಸಹಿ ಇಲ್ಲದ್ದಕ್ಕೆ ತಿರಸ್ಕೃತ, ಮಾರ್ಚ್‌ 20 ನಾಮಪತ್ರ ವಾಪಸು ಪಡೆಯಲು ಕಡೆಯ ದಿನ

ಬೆಂಗಳೂರು : ಮಾರ್ಚ್‌ 28ರಂದು ನಡೆಯುವ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ ಪಕ್ಷೇತರ ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿವೆ.

ಶನಿವಾರ ನಾಮಪತ್ರಗಳ ಪರಿಶೀಲನೆ ನಡೆಸಿದ ಚುನಾವಣಾಧಿಕಾರಿ ಎಸ್‌.ಬಿ.ಪಾಟೀಲ್‌, ಸೂಚಕರ ಸಹಿ ಇಲ್ಲದ ಕಾರಣ ಶಶಿಕುಮಾರ್‌, ಸುಧಾಕರ್‌, ಹರಿಶ್ಚಂದ್ರ ಚಂದ್ರಗೌಡ ಹಾಗೂ ಮುನಿರೆಡ್ಡಿ ಅವರ ನಾಮಪತ್ರಗಳನ್ನು ತಿರಸ್ಕರಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಕೆ.ಬಿ.ಶಾಣಪ್ಪ, ಜಾತ್ಯತೀತ ಜನತಾದಳದ ಎಂ.ರಾಜಶೇಖರಮೂರ್ತಿ, ಕಾಂಗ್ರೆಸ್‌ನ ರೆಹಮಾನ್‌ ಖಾನ್‌, ಜೆಡಿಎಸ್‌ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಯು.ಆರ್‌.ಅನಂತಮೂರ್ತಿ ಹಾಗೂ ಪಕ್ಷೇತರ ಉಮೇದುವಾರ ಮಲ್ಲಪ್ಪ ಚನ್ನಪ್ಪ ಅವರ ನಾಮಪತ್ರಗಳು ಕ್ರಮ ಬದ್ಧವಾಗಿವೆ ಎಂದು ಅವರು ರಾಜ್ಯ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಮಾರ್ಚ್‌ 20 ನಾಮಪತ್ರ ವಾಪಸು ಪಡೆಯಲು ಕಡೆಯ ದಿನವಾಗಿದ್ದು, ಅಂತಿಮವಾಗಿ ಕಣದಲ್ಲಿ ಉಳಿಯುವವರ ಕುರಿತು ಸ್ಪಷ್ಟ ಮಾಹಿತಿ ಅಂದೇ ದೊರೆಯಲಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X