ಏಳು ಮಂದಿ ಸಾವು, ಇನ್ನೆರಡು ದಿನ ವರುಣನ ಆರ್ಭಟ?
ಏಳು
ಮಂದಿ
ಸಾವು,
ಇನ್ನೆರಡು
ದಿನ
ವರುಣನ
ಆರ್ಭಟ?
ಗುಲ್ಬರ್ಗ,
ರಾಯಚೂರು,
ಕುಂದಾಪುರದಲ್ಲಿ
ಭಾರೀ
ಮಳೆ,
ಮನೆ
ಕುಸಿತ,
ಬೆಳೆ
ನಾಶ
ಗುಲ್ಪರ್ಗದಲ್ಲಿ ಸಿಡಿಲು ಬಡಿದು ಐವರು ಮೃತಪಟ್ಟಿದ್ದಾರೆ. ಜಿಲ್ಲೆಯ ಯಾದಗಿರಿ ತಾಲೂಕಿನ ರಾಮಪುರದಲ್ಲಿ ಕುರಿ ಮೇಯಿಸುತ್ತಿದ್ದ ಐದು ಮಂದಿ, ಮಳೆಯಿಂದ ಪಾರಾಗಲು ಮರದ ಕೆಳಗೆ ಹೋಗಿದ್ದಾರೆ. ಆಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಮಳೆ ಅಬ್ಬರಕ್ಕೆ 9 ಕುರಿಗಳು ಬಲಿಯಾಗಿವೆ. ಜಿಲ್ಲೆಯಲ್ಲಿ 10ಕೋಟಿ ಮೌಲ್ಯದ ಬೆಳೆ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ತುಮಾಕೂರಿನಲ್ಲಿ ಒಬ್ಬರು ಮತ್ತು ಮಾನ್ವಿಯಲ್ಲಿ ಒಬ್ಬರು ಸೇರಿದಂತೆ ಇಬ್ಬರು ವೃದ್ಧೆಯರು ಮನೆ ಕುಸಿತದಿಂದ ಸಾವನ್ನಪ್ಪಿದ್ದಾರೆ. ಬಳ್ಳಾರಿ, ಕೊಪ್ಪಳ, ರಾಯಚೂರು, ಕುಂದಾಪುರ, ಬಾಗಲಕೋಟೆ, ವಿಜಾಪುರ ಸೇರಿದಂತೆ ವಿವಿಧೆಡೆ ಮಳೆಯಾಗಿದೆ.
ಮುಂದಿನ ಎರಡು ಮೂರು ದಿನಗಳು ರಾಜ್ಯದಲ್ಲಿ ಗುಡುಗು ಸಿಡಿಲು ಸೇರಿದ ಬಿರುಸು ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸಾವು ನೋವು : ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಶುಕ್ರವಾರದ ಅಕಾಲಿಕ ಮಳೆಯಿಂದ ಸುಮಾರು 60ಮಂದಿ ಸಾವನ್ನಪ್ಪಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ಕುಮಾರ-ಪರ್ವ