ಬಯೋಟೆಕ್ ರಾಣಿಗೆ ಬೆಂಗಳೂರು ಸಾಕುಸಾಕಾಯ್ತಂತೆ!
ಬಯೋಟೆಕ್
ರಾಣಿಗೆ
ಬೆಂಗಳೂರು
ಸಾಕುಸಾಕಾಯ್ತಂತೆ!
ವಿಪ್ರೋ
ಇನ್ಫೋಸಿಸ್
ಪ್ರತಾಪದ
ನಂತರ,
ಬಯೋಕಾನ್
ಪ್ರಲಾಪ
ಬಯೋಕಾನ್ ಸಂಸ್ಥೆ ಅಧ್ಯಕ್ಷೆ ಹಾಗೂ ವ್ಯವಸ್ಥಾಪಕ ನಿರ್ದೇಶಕಿಯಾಗಿರುವ ಅವರು , ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಉದ್ಯಮಕ್ಕೆ ಸರ್ಕಾರದಿಂದ ಬೆಂಬಲ ದೊರೆಯುತ್ತಿಲ್ಲವಾದ್ದರಿಂದ, ನಮ್ಮ ಸಂಸ್ಥೆಯ ಮುಂದಿನ ವಿಸ್ತರಣೆ ಬೇರೆ ರಾಜ್ಯಗಳಲ್ಲಿ ನಡೆಯಲಿದೆ ಎಂದು ಹೇಳಿದರು.
ರಾಜಕಾರಣಿಗಳು ಬೇಜವಾಬ್ದಾರಿತನ ತೋರಿದರೂ, ಆಡಳಿತಗಾರರು ಪರಿಣಾಮಕಾರಿಯಾಗಿದ್ದರೆ ಅಭಿವೃದ್ಧಿ ಕಾಣಬಹುದು. ದುರದೃಷ್ಟವಶಾತ್ ಆಡಳಿತವೂ ಇಲ್ಲಿ ಸರ್ಕಾರದಷ್ಟೇ ನಿಷ್ಕಿೃಯವಾಗಿದೆ ಎಂದು ಟೀಕಿಸಿದರು.
ಬರೀ ಪ್ರಯಾಣದಲ್ಲೇ ಸಾಕಷ್ಟು ಅಮೂಲ್ಯ ಸಮಯ ಹಾಳಾಗುವುದರಿಂದ ಅಭಿವೃದ್ಧಿಗೆ ಹೊಡೆತ ಬೀಳುತ್ತಿದೆ. ಇಂದು ಹೈದರಾಬಾದ್ ಕೊಂಚ ಮಟ್ಟಿಗೆ ಬೆಂಗಳೂರನ್ನು ಹಿಂದಿಕ್ಕಿದೆ. ಅಮೆರಿಕಾ ಅಧ್ಯಕ್ಷ ಜಾರ್ಜ್ ಬುಷ್ ಹೈದರಾಬಾದಿಗೆ ಹೋದರು. ಆದರೆ ಬೆಂಗಳೂರಿಗೆ ಬರಲಿಲ್ಲ. ಇದಕ್ಕೆ ಮೂಲಸೌಕರ್ಯದ ಕೊರತೆಯೇ ಕಾರಣ ಎಂದು ಆರೋಪಿಸಿದರು.
(ಏಜೆನ್ಸೀಸ್)
ಮುಖಪುಟ / ಐಟಿ - ಬಿಟಿ