ಮುತ್ತತ್ತಿರಾಯನ ಸನ್ನಿಧಿಗೆ ಹೋದವರು ಮತ್ತೆ ಮರಳಲಿಲ್ಲ!
ಮುತ್ತತ್ತಿರಾಯನ
ಸನ್ನಿಧಿಗೆ
ಹೋದವರು
ಮತ್ತೆ
ಮರಳಲಿಲ್ಲ!
ಮಂಡ್ಯ
ಬಳಿ
ಲಾರಿ
ಉರುಳಿ
ಹದಿಮೂರು
ಸಾವು,
50ಕ್ಕೂ
ಅಧಿಕ
ಮಂದಿಗೆ
ಗಾಯ
ದುರಂತದ ವಿವರ : ಮುತ್ತತ್ತಿಯ ಮುತ್ತತ್ತಿರಾಯನಿಗೆ ಹರಕೆ ಸಲ್ಲಿಸಲೆಂದು ಹೊರಟಿದ್ದ ಭಕ್ತ ಸಮೂಹ ಮಾರ್ಗ ಮಧ್ಯೆ ಸಂಭವಿಸಿದ ದುರ್ಘಟನೆಯಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ಈ ಘಟನೆಯಲ್ಲಿ ಹದಿಮೂರು ಮಂದಿ ಬಲಿಯಾಗಿದ್ದಾರೆ.
ಈ ಭಕ್ತರನ್ನು ಹೊತ್ತೊಯ್ಯುತ್ತಿದ್ದ ಲಾರಿ, ಮಾರ್ಗಮಧ್ಯೆಯ ತಿರುವೊಂದರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿ, ಅಪಾಯಕ್ಕೆ ದಾರಿಯಾಯಿತು. ಸುಮಾರು 50ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಮೃತರಲ್ಲಿ ಬಹುಮಂದಿಯನ್ನು ತಿ.ನರಸೀಪುರದವರು ಎಂದು ಗುರ್ತಿಸಲಾಗಿದೆ.
ವರ್ಷಕ್ಕೊಮ್ಮೆ ಮುತ್ತತ್ತಿರಾಯನಿಗೆ ಹರಕೆ ಸಲ್ಲಿಸುವುದು ಈ ಭಾಗದಲ್ಲಿ ಮೊದಲಿನಿಂದಲೂ ನಡೆದು ಬಂದಿದೆ. ಈ ಸಂದರ್ಭದಲ್ಲಿ ಕೋಳಿ ಕುರಿಗಳನ್ನು ಬಲಿ ನೀಡುವುದು ಸಂಪ್ರದಾಯ. ಆಶ್ಚರ್ಯಕರವೆಂದರೆ ಈ ನತದೃಷ್ಟ ಲಾರಿಯಲ್ಲಿಯೇ ಇದ್ದ 10ತಿಂಗಳ ಕೂಸು ಮತ್ತು ಹರಕೆಯ ಕೋಳಿಗಳಿಗೆ ಯಾವುದೇ ತೊಂದರೆಯಾಗಿಲ್ಲ.
ಗಾಡ್ ಈಸ್ ಗ್ರೇಟ್!
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ಕುಮಾರ-ಪರ್ವ