ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುತ್ತತ್ತಿರಾಯನ ಸನ್ನಿಧಿಗೆ ಹೋದವರು ಮತ್ತೆ ಮರಳಲಿಲ್ಲ!

By Staff
|
Google Oneindia Kannada News

ಮುತ್ತತ್ತಿರಾಯನ ಸನ್ನಿಧಿಗೆ ಹೋದವರು ಮತ್ತೆ ಮರಳಲಿಲ್ಲ!
ಮಂಡ್ಯ ಬಳಿ ಲಾರಿ ಉರುಳಿ ಹದಿಮೂರು ಸಾವು, 50ಕ್ಕೂ ಅಧಿಕ ಮಂದಿಗೆ ಗಾಯ

ಮಂಡ್ಯ: ಜಿಲ್ಲೆಯಲ್ಲಿ ಸಂಭವಿಸಿದ ವಾಹನ ಅಪಘಾತದಿಂದ ತೀವ್ರವಾಗಿ ಗಾಯಗೊಂಡಿರುವ ಗಾಯಾಳುಗಳು ಶನಿವಾರ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಒಂದಿಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ದುರಂತದ ವಿವರ : ಮುತ್ತತ್ತಿಯ ಮುತ್ತತ್ತಿರಾಯನಿಗೆ ಹರಕೆ ಸಲ್ಲಿಸಲೆಂದು ಹೊರಟಿದ್ದ ಭಕ್ತ ಸಮೂಹ ಮಾರ್ಗ ಮಧ್ಯೆ ಸಂಭವಿಸಿದ ದುರ್ಘಟನೆಯಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ಈ ಘಟನೆಯಲ್ಲಿ ಹದಿಮೂರು ಮಂದಿ ಬಲಿಯಾಗಿದ್ದಾರೆ.

ಈ ಭಕ್ತರನ್ನು ಹೊತ್ತೊಯ್ಯುತ್ತಿದ್ದ ಲಾರಿ, ಮಾರ್ಗಮಧ್ಯೆಯ ತಿರುವೊಂದರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿ, ಅಪಾಯಕ್ಕೆ ದಾರಿಯಾಯಿತು. ಸುಮಾರು 50ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಮೃತರಲ್ಲಿ ಬಹುಮಂದಿಯನ್ನು ತಿ.ನರಸೀಪುರದವರು ಎಂದು ಗುರ್ತಿಸಲಾಗಿದೆ.

ವರ್ಷಕ್ಕೊಮ್ಮೆ ಮುತ್ತತ್ತಿರಾಯನಿಗೆ ಹರಕೆ ಸಲ್ಲಿಸುವುದು ಈ ಭಾಗದಲ್ಲಿ ಮೊದಲಿನಿಂದಲೂ ನಡೆದು ಬಂದಿದೆ. ಈ ಸಂದರ್ಭದಲ್ಲಿ ಕೋಳಿ ಕುರಿಗಳನ್ನು ಬಲಿ ನೀಡುವುದು ಸಂಪ್ರದಾಯ. ಆಶ್ಚರ್ಯಕರವೆಂದರೆ ಈ ನತದೃಷ್ಟ ಲಾರಿಯಲ್ಲಿಯೇ ಇದ್ದ 10ತಿಂಗಳ ಕೂಸು ಮತ್ತು ಹರಕೆಯ ಕೋಳಿಗಳಿಗೆ ಯಾವುದೇ ತೊಂದರೆಯಾಗಿಲ್ಲ.

ಗಾಡ್‌ ಈಸ್‌ ಗ್ರೇಟ್‌!

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ಕುಮಾರ-ಪರ್ವ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X