ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಾರಾಣಾಸಿ ಸ್ಫೋಟ : ಹೊಣೆ ಹೊತ್ತ ಲಷ್ಕರ್-ಇ-ಕಹರ್
ವಾರಾಣಾಸಿ
ಸ್ಫೋಟ
:
ಹೊಣೆ
ಹೊತ್ತ
ಲಷ್ಕರ್-ಇ-ಕಹರ್
ಭಾರತ
ನಿದ್ರೆ
ಮಾಡಲು
ಬಿಡೆವು,
ಇಂತಹುದೇ
ಹಲವು
ಕೃತ್ಯಗಳಿಗೆ
ತಯಾರು
ಈ ಉಗ್ರ ಸಂಘಟನೆ ವಕ್ತಾರ ಎಂದು ಹೇಳಿಕೊಂಡಿರುವ ಅಬ್ದುಲ್ಲಾ ಜಬ್ಬಾರ್ ಅಲಿಯಾಸ್ ಅಬು ಕಹರ್, ಸ್ಥಳೀಯ ಸುದ್ದಿಸಂಸ್ಥೆಯಾಂದಕ್ಕೆ ಗುರುವಾರ ಮುಂಜಾನೆ ದೂರವಾಣಿ ಕರೆಮಾಡಿ, ಕೃತ್ಯದ ಹೊಣೆ ಹೊತ್ತುಕೊಂಡಿದ್ದಾನೆ.
ಕಾಶ್ಮೀರಿಗಳಿಗೆ ಕಿರುಕುಳ ಕೊಡುವುದು ಹಾಗೂ ಅವರನ್ನು ಬಂಧಿಸುವುದು ನಿಲ್ಲುವವರೆಗೂ ಭಾರತೀಯರನ್ನು ಶಾಂತಿಯಿಂದ ಮಲಗಲು ಬಿಡುವುದಿಲ್ಲ. ಅಲ್ಲದೆ ಭಾರತಾದ್ಯಂತ ಇಂತಹುದೇ ಹಲವು ಕೃತ್ಯಗಳನ್ನು ಮಾಡಬೇಕಾಗುತ್ತದೆ ಎಂದು ಆತ ಎಚ್ಚರಿಸಿದ್ದಾನೆ.
ಮಂಗಳವಾರ ವಾರಾಣಾಸಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಸುಮಾರು 30 ಜನ ಮೃತಪಟ್ಟು, ನೂರಕ್ಕೂ ಹೆಚ್ಚು ಜನ ಗಾಯಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
(ಏಜೆನ್ಸೀಸ್)
ಮುಖಪುಟ / ಕುಮಾರ-ಪರ್ವ
Story first published: Friday, March 10, 2006, 23:53 [IST]