ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಖ ಸಂಚಾರಕ್ಕೆ ಹತ್ತು ಸೂತ್ರಗಳು : ಕುಮಾರ ಸ್ವಾಮಿ

By Staff
|
Google Oneindia Kannada News

ಸುಖ ಸಂಚಾರಕ್ಕೆ ಹತ್ತು ಸೂತ್ರಗಳು : ಕುಮಾರ ಸ್ವಾಮಿ
ಕ್ಯಾಮರಾ ಅಳವಡಿಕೆಯಿಂದ, ವಾಹನ ದಟ್ಟಣೆ ತಡೆಗೆ ನೂತನ ಪ್ರಯತ್ನ...

ಬೆಂಗಳೂರು : ನಗರ ಸಂಚಾರ ದಟ್ಟಣೆಗೆ ಸೂಕ್ತ ಪರಿಹಾರ ಒದಗಿಸಲು ಸರ್ಕಾರ 10 ಸೂತ್ರಗಳನ್ನೊಳಗೊಂಡ ಯೋಜನೆಯಾಂದನ್ನು ರೂಪಿಸಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಜಯನಗರ 4ನೇ ಬ್ಲಾಕ್‌ನಲ್ಲಿ ಆಧುನಿಕ ಮಾದರಿ ಬಸ್‌ ನಿಲ್ದಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನಗರದಲ್ಲಿ ವಾಹನ ದಟ್ಟಣೆಯಾಗುವ 200 ರಸ್ತೆಗಳಿದ್ದು, ಸಿಗ್ನಲ್‌ಗಳಲ್ಲಿ ವಾಹನ ದಟ್ಟಣೆ ಜಾಸ್ತಿ ಇರುವ ಕಡೆ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದರು.

ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಚಾಲಕರಿಗೆ ಮೂರು ಬಾರಿ ದಂಡ ವಿಧಿಸಲಾಗುತ್ತದೆ. ನಾಲ್ಕನೇ ಬಾರಿ ಅದೇ ತಪ್ಪು ಮಾಡಿದಲ್ಲಿ, ಚಾಲಕರ ಪರವಾನಗಿಯನ್ನೇ ರದ್ದುಗೊಳಿಸಲಾಗುವುದು. ಈ ಎಲ್ಲಾ ಹೊಸ ಪ್ರಯತ್ನಗಳು ಈ 10 ಸೂತ್ರಗಳಲ್ಲಿ ಅಡಗಿವೆ ಎಂದು ಕುಮಾರಸ್ವಾಮಿ ಹೇಳಿದರು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ಕುಮಾರ-ಪರ್ವ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X