ಬೆಂಗಳೂರು ಮೆಟ್ರೊ ರೈಲಿಗೀಗ ಯಾವುದೇ ತಡೆಯಿಲ್ಲ!
ಬೆಂಗಳೂರು
ಮೆಟ್ರೊ
ರೈಲಿಗೀಗ
ಯಾವುದೇ
ತಡೆಯಿಲ್ಲ!
ಕೇಂದ್ರದ
ಉತ್ಸುಕತೆ,
ಶೀಘ್ರವೇ
ಒಪ್ಪಂದಕ್ಕೆ
ಸಹಿ
;
ಜಪಾನ್
ಅಂತರಾಷ್ಟ್ರೀಯ
ಬ್ಯಾಂಕ್
ನೆರವು
ಕೇಂದ್ರ ಹಣಕಾಸು ಸಚಿವ ಚಿದಂಬರಂ, ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್, ನಗರಾಭಿವೃದ್ಧಿ ಸಚಿವ ಜೈಪಾಲ್ ರೆಡ್ಡಿ ಹಾಗೂ ಕಾನೂನು ಸಚಿವ ಭಾರದ್ವಾಜ್ ಅವರನ್ನೊಳಗೊಂಡ ತಂಡ ಯೋಜನೆಗೆ ಸಂಬಂಧಿಸಿದ ಕೆಲವು ಸೂಕ್ಷ್ಮ ವಿಚಾರಗಳ ಕುರಿತು ಚರ್ಚೆ ನಡೆಸಿತು. ಅಂತಿಮವಾಗಿ ಗ್ರೀನ್ ಸಿಗ್ನಲ್ ಲಭ್ಯವಾಗಿದೆ.
ರಾಜ್ಯ ಟ್ರ್ಯಾಮ್ ವೇ ಕಾಯ್ದೆ, ರೈಲು ಕಾಯ್ದೆ ಹಾಗೂ ಯೋಜನೆಗೆ ಯಾವ ಹಳಿ ಜೋಡಿಸಬೇಕು ಎಂಬ ವಿಚಾರಗಳು ಸಭೆಯಲ್ಲಿ ಪ್ರಸ್ತಾಪವಾದವು. ಯೋಜನೆ ರಾಜ್ಯಕ್ಕೆ ಸೇರಿದ ವಿಷಯ. ರಾಜ್ಯ ಸರ್ಕಾರ ಯಾವ ಗೇಜ್ ಬಳಸಬೇಕು ಎಂಬುದನ್ನು ಸಂಬಂಧಪಟ್ಟ ಸಂಸ್ಥೆಗಳೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಂಡ ಅಭಿಪ್ರಾಯಪಟ್ಟಿತು.
ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡ ಯೋಜನೆಗೆ ಆಕರ್ಷಿತರಾಗಿದ್ದಾರೆ. ಅಲ್ಲದೆ ಮಾರ್ಚ್ ಅಂತ್ಯಕ್ಕೆ ಪ್ರಸಕ್ತ ಹಣಕಾಸು ವರ್ಷ ಅಂತ್ಯಗೊಳ್ಳುವುದರಿಂದ, ಅಷ್ಟರೊಳಗೇ ಈ ಕುರಿತ ಒಪ್ಪಂದಕ್ಕೆ ಸಹಿ ಹಾಕಲು ಕೇಂದ್ರ ಸರ್ಕಾರ ಆಸಕ್ತಿಯನ್ನೂ ತೋರಿದೆ. ಹಾಗಾಗಿ ಶೀಘ್ರದಲ್ಲೇ ಕಾಮಗಾರಿಯೂ ಆರಂಭವಾಗುವ ನಿರೀಕ್ಷೆ ಇದೆ. ಜಪಾನ್ ಅಂತಾರಾಷ್ಟ್ರೀಯ ಬ್ಯಾಂಕು ಯೋಜನೆಗೆ ನೆರವಿನ ಹಸ್ತ ಚಾಚಿದೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ಕುಮಾರ-ಪರ್ವ