ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಸಮ್ಮೇಳನಾಧ್ಯಕ್ಷರಾಗಿ ಶಿವರಾಜ್‌ ಪಾಟೀಲ್‌ ಆಯ್ಕೆ

By Staff
|
Google Oneindia Kannada News

ಕನ್ನಡ ಸಮ್ಮೇಳನಾಧ್ಯಕ್ಷರಾಗಿ ಶಿವರಾಜ್‌ ಪಾಟೀಲ್‌ ಆಯ್ಕೆ
ಏಪ್ರಿಲ್‌ 8ರಿಂದ 9ರವರೆಗೆ ನವದೆಹಲಿಯಲ್ಲಿ ಸಮ್ಮೇಳನ, ನ್ಯಾಯಮೂರ್ತಿ ಬಿ.ಎನ್‌.ಶ್ರೀಕೃಷ್ಣ ಉದ್ಘಾಟನೆ

ನವದೆಹಲಿ : ನಗರದಲ್ಲಿ ನಡೆಯಲಿರುವ 23ನೇ ರಾಷ್ಟ್ರೀಯ ಕನ್ನಡ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್‌ ಪಾಟೀಲ್‌ ಆಯ್ಕೆಯಾಗಿದ್ದಾರೆ.

‘ದೆಹಲಿ ಕನ್ನಡಿಗ’ ಪತ್ರಿಕೆಯ ಆಶ್ರಯದಲ್ಲಿ ಏಪ್ರಿಲ್‌8 ಮತ್ತು 9ರಂದು ಈ ಸಮ್ಮೇಳನ ನಡೆಯಲಿದೆ. ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಶಿವರಾಜ್‌ ಪಾಟೀಲ್‌, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರೂ ಹೌದು.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಬಿ.ಎನ್‌.ಶ್ರೀಕೃಷ್ಣ ಸಮ್ಮೇಳನ ಉದ್ಘಾಟಿಸಲಿದ್ದು, ಸಮ್ಮೇಳನದ ವಿವಿಧ ಕಾರ್ಯಕ್ರಮಗಳನ್ನು ಗಾಯಕ ಶಿವಮೊಗ್ಗ ಸುಬ್ಬಣ್ಣ, ಮಾಜಿ ಐಪಿಎಸ್‌ ಅಧಿಕಾರಿ ಪಿ.ಜೆ. ಬಾಗಿಲ್ತಾಯ, ಪಾಂಡಿಚೇರಿ ವಿ.ವಿ.ಯ ಸಾಹಿತಿ ಎಲ್‌.ಪ್ರೇಮಶೇಖರ, ಚಿತ್ರ ಕಲಾವಿದ ವಿ.ಸಿ.ಮಾಲಗತ್ತಿ, ಜವಹರ್‌ಲಾಲ್‌ ನೆಹರು ವಿವಿಯ ಮುಖ್ಯ ಗ್ರಂಥಪಾಲಕ ಡಾ.ಮುತ್ತಯ್ಯ ಕೋಗನೂರಮಠ ಅವರು ಉದ್ಘಾಟಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಕೇಂದ್ರ ಜಾಗೃತ ಆಯುಕ್ತ ಪಿ.ಶಂಕರ್‌ ಅವರಿಗೆ ಶ್ರೇಷ್ಠ ಹೊರನಾಡ ಕನ್ನಡಿಗ ಪ್ರಶಸ್ತಿ ನೀಡಲಾಗುವುದು. ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ನ ಅಧ್ಯಕ್ಷ ಕೆ.ಎನ್‌. ಪೃಥ್ವಿರಾಜ್‌ ಅವರಿಗೆ ಶ್ರೇಷ್ಠ ಬ್ಯಾಂಕರ್‌ ಪ್ರಶಸ್ತಿ ನೀಡಲಾಗುವುದು.

ದೆಹಲಿಯಲ್ಲಿ ಕರ್ನಾಟಕದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆಗಿದ್ದ ದಿ.ಕೆ.ಆರ್‌. ನಾಗರಾಜ ಅವರಿಗೆ ಮರಣೋತ್ತರವಾಗಿ ಶ್ರೇಷ್ಠ ದೆಹಲಿ ಕನ್ನಡಿಗ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X