ಕನ್ನಡ ಸಮ್ಮೇಳನಾಧ್ಯಕ್ಷರಾಗಿ ಶಿವರಾಜ್ ಪಾಟೀಲ್ ಆಯ್ಕೆ
ಕನ್ನಡ
ಸಮ್ಮೇಳನಾಧ್ಯಕ್ಷರಾಗಿ
ಶಿವರಾಜ್
ಪಾಟೀಲ್
ಆಯ್ಕೆ
ಏಪ್ರಿಲ್
8ರಿಂದ
9ರವರೆಗೆ
ನವದೆಹಲಿಯಲ್ಲಿ
ಸಮ್ಮೇಳನ,
ನ್ಯಾಯಮೂರ್ತಿ
ಬಿ.ಎನ್.ಶ್ರೀಕೃಷ್ಣ
ಉದ್ಘಾಟನೆ
‘ದೆಹಲಿ ಕನ್ನಡಿಗ’ ಪತ್ರಿಕೆಯ ಆಶ್ರಯದಲ್ಲಿ ಏಪ್ರಿಲ್8 ಮತ್ತು 9ರಂದು ಈ ಸಮ್ಮೇಳನ ನಡೆಯಲಿದೆ. ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಶಿವರಾಜ್ ಪಾಟೀಲ್, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರೂ ಹೌದು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ಸಮ್ಮೇಳನ ಉದ್ಘಾಟಿಸಲಿದ್ದು, ಸಮ್ಮೇಳನದ ವಿವಿಧ ಕಾರ್ಯಕ್ರಮಗಳನ್ನು ಗಾಯಕ ಶಿವಮೊಗ್ಗ ಸುಬ್ಬಣ್ಣ, ಮಾಜಿ ಐಪಿಎಸ್ ಅಧಿಕಾರಿ ಪಿ.ಜೆ. ಬಾಗಿಲ್ತಾಯ, ಪಾಂಡಿಚೇರಿ ವಿ.ವಿ.ಯ ಸಾಹಿತಿ ಎಲ್.ಪ್ರೇಮಶೇಖರ, ಚಿತ್ರ ಕಲಾವಿದ ವಿ.ಸಿ.ಮಾಲಗತ್ತಿ, ಜವಹರ್ಲಾಲ್ ನೆಹರು ವಿವಿಯ ಮುಖ್ಯ ಗ್ರಂಥಪಾಲಕ ಡಾ.ಮುತ್ತಯ್ಯ ಕೋಗನೂರಮಠ ಅವರು ಉದ್ಘಾಟಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಕೇಂದ್ರ ಜಾಗೃತ ಆಯುಕ್ತ ಪಿ.ಶಂಕರ್ ಅವರಿಗೆ ಶ್ರೇಷ್ಠ ಹೊರನಾಡ ಕನ್ನಡಿಗ ಪ್ರಶಸ್ತಿ ನೀಡಲಾಗುವುದು. ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ನ ಅಧ್ಯಕ್ಷ ಕೆ.ಎನ್. ಪೃಥ್ವಿರಾಜ್ ಅವರಿಗೆ ಶ್ರೇಷ್ಠ ಬ್ಯಾಂಕರ್ ಪ್ರಶಸ್ತಿ ನೀಡಲಾಗುವುದು.
ದೆಹಲಿಯಲ್ಲಿ ಕರ್ನಾಟಕದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿದ್ದ ದಿ.ಕೆ.ಆರ್. ನಾಗರಾಜ ಅವರಿಗೆ ಮರಣೋತ್ತರವಾಗಿ ಶ್ರೇಷ್ಠ ದೆಹಲಿ ಕನ್ನಡಿಗ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು