ಗಂಗೂಬಾಯಿ ಅಂದ್ರೆ ಜೀವನ ಪ್ರೀತಿ -ನಾನಾ ಪಾಟೇಕರ್
ಗಂಗೂಬಾಯಿ
ಅಂದ್ರೆ
ಜೀವನ
ಪ್ರೀತಿ
-ನಾನಾ
ಪಾಟೇಕರ್
ಹುಬ್ಬಳ್ಳಿಯ
ಸವಾಯಿ
ಗಂಧರ್ವ
ಕಲಾಭವನದಲ್ಲಿ
ಸ್ವರ
ಸಾಮ್ರಾಜ್ಞಿಗೆ
ಸನ್ಮಾನ
ನಗರದ ಸವಾಯಿ ಗಂಧರ್ವ ಕಲಾಭವನದಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಹಾನಗಲ್ ಅವರ ಪಾದ ಸ್ಪರ್ಶಿಸಿ, ಎಷ್ಟೋ ಮಂದಿ ಪುಳಕಿತರಾದರು. ಭಾನುವಾರ(ಮಾ.5)ದ ಈ ಸಮಾರಂಭದ ಅವಿಸ್ಮರಣೀಯ ಕ್ಷಣಗಳನ್ನು ತಮ್ಮದಾಗಿಸಿಕೊಳ್ಳಲು, ಮುಂಬೈನಿಂದ ಖ್ಯಾತ ಬಾಲಿವುಡ್ ನಟ ನಾನಾ ಪಾಟೇಕರ್ ಆಗಮಿಸಿದ್ದರು.
94ಸಿಹಿ ಪೇಢೆಗಳನ್ನು ಅಭಿಮಾನಿಗಳು ಹಾನಗಲ್ ಅವರಿಗೆ ಅರ್ಪಿಸಿದರು. ಸಮಾರಂಭ ಉದ್ದೇಶಿಸಿ ಮಾತನಾಡಿದ ಹಾನಗಲ್, ತಮ್ಮ ಹೃದಯದಾಳದ ಪ್ರೀತಿಗೆ ಪದಗಳನ್ನು ಹುಡುಕಲು ತಿಣುಕಾಡಿದರು. ಧಾರವಾಡ ನನ್ನ ಜನ್ಮಭೂಮಿ. ಆದರೆ ಹುಬ್ಬಳ್ಳಿ ನನ್ನನ್ನು ಬೆಳೆಸಿದ ಭೂಮಿ. ಹುಬ್ಬಳ್ಳಿ ನನ್ನ ಬಿಡೋದಿಲ್ಲ. ನಾನು ಹುಬ್ಬಳ್ಳಿ ಬಿಡೋದಿಲ್ಲ ಎಂದರು.
ನಟ ನಾನಾ ಪಾಟೇಕರ್ ಮಾತನಾಡಿ, ನನ್ನ ನಿನ್ನ ಸಂಬಂಧವನ್ನು ಹೇಗೆ ಹೇಳಲಿ. ನೀನು ನನ್ನ ಜೀವದಲ್ಲಿ ಅಮ್ಮ, ಸಂಗೀತ, ಜೀವನ ಪ್ರೀತಿ ಎಲ್ಲವೂ ಆಗಿರುವೆ ಎಂದು ಭಾವುಕರಾದರು. ಗೇಣುತ್ತಾ ಇದ್ದರೂ, ಗೌರಿ ಶಂಕರದಂತೆ ಸಾಧನೆಯಿಂದ ಬೆಳೆದ ಹಾನಗಲ್ರ ವ್ಯಕ್ತಿತ್ವವನ್ನು ಕೊಂಡಾಡಿದರು.
ಜೆಜೆ ಕಾಲೇಜಿನಲ್ಲಿ ಓದುತ್ತಿದ್ದ ದಿನಗಳನ್ನು ಮತ್ತು ಆಸಂದರ್ಭದಲ್ಲಿ ಹಾನಗಲ್ರ ಸಂಗೀತ ಕಾರ್ಯಕ್ರಮ ಹಾಳು ಮಾಡಲು ಯತ್ನಿಸಿ, ಸಂಗೀತಕ್ಕೆ ಸೋತ ಸಂದರ್ಭವನ್ನು ಪಾಟೇಕರ್ ನೆನೆದರು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು