ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದೇವೂ ಬೆಂಗಾವಲು ಪಡೆ ವಾಹನ ಡಿಕ್ಕಿ, ವ್ಯಕ್ತಿಯಾಬ್ಬನ ಸಾವು
ದೇವೂ
ಬೆಂಗಾವಲು
ಪಡೆ
ವಾಹನ
ಡಿಕ್ಕಿ,
ವ್ಯಕ್ತಿಯಾಬ್ಬನ
ಸಾವು
ಕಿಮ್ಸ್
ಆಸ್ಪತ್ರೆಯಲ್ಲಿ
ಚಿಕಿತ್ಸೆ,
ಗಮನ
ನೀಡದ
ನಾಯಕ
ಮಣಿಗಳು...!?
ಡಿಸೆಂಬರ್10ರಂದು, ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆ ಪ್ರಚಾರಕ್ಕಾಗಿ ಮಾಜಿ ಪ್ರಧಾನಿ ದೇವೇಗೌಡ ಹುಬ್ಬಳ್ಳಿಗೆ ಆಗಮಿಸಿದ್ದರು. ಆಗ ಕೇಶ್ವಾಪುರದ ಬಳಿ ದೇವೇಗೌಡರ ಬೆಂಗಾವಲು ಪಡೆಯ ಕಾರು ರಂಗಯ್ಯನಿಗೆ ಅಪ್ಪಳಿಸಿತ್ತು.
ಮೂಲತಃ ಆಂಧ್ರದವನಾದ ರಂಗಯ್ಯ ಹುಬ್ಬಳ್ಳಿಯ ಕಿಮ್ಸ್ ಎದುರಿಗಿರುವ ಕೃತಕ ಕಾಲು ಜೋಡಣಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ. ಅಪಘಾತದ ಬಳಿಕ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.
ಮಾಜಿ ಸಂಸದ ವಿಜಯ ಸಂಕೇಶ್ವರ ಆತನ ಚಿಕಿತ್ಸೆಗಾಗಿ 6 ಸಾವಿರ ರೂಪಾಯಿ ಸಹಾಯ ಧನ ನೀಡಿದ್ದರು. ಮಾಜಿ ಪ್ರಧಾನಿ ದೇವೇಗೌಡ ಕೂಡ 10 ಸಾವಿರ ರೂಪಾಯಿ ನೆರವು ನೀಡಿದ್ದರು. ಆದರೆ, ಆನಂತರ ಗಾಯಾಳುವಿನ ಸ್ಥಿತಿ ಬಗ್ಗೆ ಯಾರೂ ಕಾಳಜಿ ವಹಿಸಲಿಲ್ಲ ಎಂಬ ಮಾತು ಕೇಳಿಬಂದಿದೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Story first published: Sunday, March 5, 2006, 23:53 [IST]