ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕುಕ್ಕುಟೋದ್ಯಮ ರಕ್ಷಣೆಗೆ ಸರ್ಕಾರದಿಂದ 35ಕೋಟಿ
ಕುಕ್ಕುಟೋದ್ಯಮ
ರಕ್ಷಣೆಗೆ
ಸರ್ಕಾರದಿಂದ
35ಕೋಟಿ
ಹಾಸನ
ಜಿಲ್ಲೆಯಲ್ಲಿ
ಹಕ್ಕಿಜ್ವರದಿಂದ
ಯಾರೂ
ಸತ್ತಿಲ್ಲ
-ಕುಮಾರಸ್ವಾಮಿ
ವಿಧಾನ ಪರಿಷತ್ತಿನಲ್ಲಿ ಈ ಮಾಹಿತಿ ನೀಡಿದ ಅವರು, ಹಕ್ಕಿಜ್ವರದಿಂದ ಸಂಕಷ್ಟಕ್ಕೆ ಸಿಲುಕಿರುವ ಕುಕ್ಕುಟೋದ್ಯಮದ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಈ ಉದ್ಯಮದಲ್ಲಿ ತೊಡಗಿರುವ 15ಲಕ್ಷ ಮಂದಿ ಬೀದಿಪಾಲಾಗದಂತೆ ಎಚ್ಚರವಹಿಸುವುದಾಗಿ ಹೇಳಿದರು.
ಹಾಸನ ಜಿಲ್ಲೆಯ ಅರಕಲಗೂಡಿನ ಆನಂದ್ ಸಾವಿನ ಕಾರಣ ಪತ್ತೆಯಾಗಿಲ್ಲ. ಅವರ ಸಾವಿಗೂ ಹಕ್ಕಿಜ್ವರಕ್ಕೂ ಸಂಬಂಧವಿಲ್ಲ ಎಂದು ವೈದ್ಯಕೀಯ ಪರೀಕ್ಷೆಗಳು ಸಾಬೀತುಪಡಿಸಿವೆ ಎಂದು ಕುಮಾರಸ್ವಾಮಿ ಹೇಳಿದರು.
ಸರ್ಕಸ್ : ರಾಜ್ಯದಲ್ಲಿ ಕೋಳಿಗಳಿರಲಿ, ಮೊಟ್ಟೆಗಳನ್ನು ತಿನ್ನಲೂ ಸಹಾ ಜನರು ಮುಂದೆ ಬರುತ್ತಿಲ್ಲ. ಹೀಗಾಗಿ ಗ್ರಾಹಕರನ್ನು ಸೆಳೆಯಲು ಕುಕ್ಕುಟೋದ್ಯಮ ನಾನಾ ಸರ್ಕಸ್ಗಳನ್ನು ಮಾಡುತ್ತಿದೆ. ರಾಜ್ಯದ ವಿವಿಧೆಡೆ ಚಿಕನ್ ಖಾದ್ಯಗಳ ತಯಾರಿಸಿ, ಉಚಿತವಾಗಿ ವಿತರಿಸುವ ಕೆಲಸವೂ ನಡೆದಿದೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Thursday, March 2, 2006, 23:53 [IST]