ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಬೆಳಗಾವಿ ಕರ್ನಾಟಕದ ಎರಡನೇ ರಾಜಧಾನಿಯಾಗಲಿ’

By Staff
|
Google Oneindia Kannada News

‘ಬೆಳಗಾವಿ ಕರ್ನಾಟಕದ ಎರಡನೇ ರಾಜಧಾನಿಯಾಗಲಿ’
ಬೆಳಗಾವಿ ತಾ.ಪಂ. ವಿರುದ್ಧ ಶಿಸ್ತಿನ ಕ್ರಮ : ಮುಖ್ಯಮಂತ್ರಿ ಸುಳಿವು

ಬೆಂಗಳೂರು : ಗಡಿಭಾಗದ ಕನ್ನಡಿಗರನ್ನು ರಕ್ಷಿಸುವ ನಿಟ್ಟಿನಲ್ಲಿ ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿಯೆಂದು ಘೋಷಿಸಬೇಕೆಂದು ವಿಧಾನಪರಿಷತ್ತಿನ ಸರ್ವಪಕ್ಷಗಳ ಸದಸ್ಯರು ಒತ್ತಾಯಿಸಿದ್ದಾರೆ.

ಬೆಳಗಾವಿ ತಾಲೂಕು ಪಂಚಾಯಿತಿಯ ಕನ್ನಡ ವಿರೋಧಿ ನಿರ್ಣಯದ ಬಗ್ಗೆ ಚರ್ಚೆ ನಡೆಸಿದ ವಿಧಾನ ಪರಿಷತ್ತು ಸದಸ್ಯರು, ಬೆಳಗಾವಿ ಜಿಲ್ಲೆಯಲ್ಲಿರುವ ಕನ್ನಡಿಗರಲ್ಲಿ ವಿಶ್ವಾಸ ಮೂಡಿಸಲು ಸರ್ಕಾರ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ವಿಧಾನಪರಿಷತ್ತಿನ ಸದಸ್ಯ ಮತ್ತು ಸಾಹಿತಿ ಚಂದ್ರಶೇಖರ ಕಂಬಾರ, ಬೆಳಗಾವಿ ತಾ.ಪಂ ನಿರ್ಣಯ ದುರದೃಷ್ಟಕರ. ಭವಿಷ್ಯದಲ್ಲಿ ಇಂತಹ ಘಟನೆಗಳು ಮತ್ತೆ ನಡೆಯಬಾರದು ಎಂದರು.

ಮುಖ್ಯಮಂತ್ರಿ ಹೇಳಿಕೆ : ಬೆಳಗಾವಿ ಮಹಾನಗರ ಪಾಲಿಕೆಗಾದ ಗತಿಯೇ ತಾ.ಪಂ.ಗೆ ಆಗಲಿದೆ. ಸರ್ಕಾರ ಕನ್ನಡ ದ್ರೋಹವನ್ನು ಸಹಿಸದು. ವಿವಾದಾತ್ಮಕ ನಿರ್ಣಯ ಅಂಗೀಕರಿಸಿದ ತಾ.ಪಂ.ಗೆ ಕಾರಣ ಕೇಳಿ ನೋಟಿಸ್‌ ನೀಡಲಾಗಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X