ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವನಿಗೇಕೆ ಶಿಕ್ಷೆ ?: ಲೈಂಗಿಕ ಕಾರ್ಯಕರ್ತೆಯರ ಪ್ರತಿಭಟನೆ

By Staff
|
Google Oneindia Kannada News

ಅವನಿಗೇಕೆ ಶಿಕ್ಷೆ ?: ಲೈಂಗಿಕ ಕಾರ್ಯಕರ್ತೆಯರ ಪ್ರತಿಭಟನೆ
ಬದುಕಿಗೆ ಅನ್ನ ನೀಡುವ ಕಸುಬನ್ನು ಸರ್ಕಾರ ಕಸಿಯಬಾರದು -ಲೈಂಗಿಕ ಕಾರ್ಯಕರ್ತೆಯರ ಮನವಿ

ಬೆಂಗಳೂರು : ರಾಜ್ಯದ ಎರಡು ಸಾವಿರಕ್ಕೂ ಅಧಿಕ ಲೈಂಗಿಕ ಕಾರ್ಯಕರ್ತೆಯರು, ಕೇಂದ್ರ ಸರ್ಕಾರದ ಆದೇಶವೊಂದನ್ನು ವಿರೋಧಿಸಿ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಲೈಂಗಿಕ ಕಾರ್ಯಕರ್ತೆಯರನ್ನು ಭೇಟಿ ಮಾಡುವ ವ್ಯಕ್ತಿಗಳಿಗೆ 50ಸಾವಿರ ರೂ. ದಂಡದೊಂದಿಗೆ, ಆರು ತಿಂಗಳು ಶಿಕ್ಷೆ ವಿಧಿಸುವ ಸರ್ಕಾರದ ಆದೇಶವನ್ನು ಪ್ರತಿಭಟನೆಯಲ್ಲಿ ಖಂಡಿಸಲಾಯಿತು. ‘ಲೈಂಗಿಕ ಕಾರ್ಮಿಕರ ರಾಷ್ಟ್ರೀಯ ಒಕ್ಕೂಟ’ ಈ ಪ್ರತಿಭಟನೆಯನ್ನು ಸಂಘಟಿಸಿತ್ತು.

ಸರ್ಕಾರದ ಹೊಸ ಆದೇಶದಿಂದ ಲೈಂಗಿಕ ಕಾರ್ಯಕರ್ತೆಯರ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ. ಬದುಕಿಗೆ ಅನ್ನ ನೀಡುವ ಕಸುಬನ್ನು ಸರ್ಕಾರ ಕಸಿಯಬಾರದು ಎಂದು ಲೈಂಗಿಕ ಕಾರ್ಯಕರ್ತೆಯರು ಈ ಸಂದರ್ಭದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.

ಚಿಕ್ಕಲಾಲ್‌ಬಾಗ್‌ನಿಂದ ಹೊರಟ ರ್ಯಾಲಿ ಮಲ್ಲೇಶ್ವರದಲ್ಲಿ ಅಂತ್ಯಗೊಂಡಿತು. ಅಲ್ಲಿ ಸಾರ್ವಜನಿಕ ಸಭೆ ನಡೆಸಿದ ಲೈಂಗಿಕ ಕಾರ್ಯಕರ್ತೆಯರು ತಮ್ಮ ನೋವು-ಸಂಕಟವನ್ನು ಹಂಚಿಕೊಂಡರು.
(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X