ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಿರಿಜಮ್ಮ ಸೇರಿ ಐವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

By Staff
|
Google Oneindia Kannada News

ಗಿರಿಜಮ್ಮ ಸೇರಿ ಐವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಹಿರಿಯ ಸಾಹಿತಿ ದೇಜಗೌ ಅವರಿಗೆ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಬೆಂಗಳೂರು : ಡಾ.ಎಚ್‌.ಗಿರಿಜಮ್ಮ, ಕಾಳೇಗೌಡ ನಾಗವಾರ ಸೇರಿದಂತೆ ಐವರಿಗೆ 2005ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.

ಅಲ್ಲದೇ 18ಮಂದಿ ಲೇಖಕರ ಕೃತಿಗಳಿಗೆ 2004ನೇ ಸಾಲಿನ ಅತ್ಯುತ್ತಮ ಕೃತಿ ಪ್ರಶಸ್ತಿಯನ್ನು ಅಕಾಡೆಮಿ ನೀಡಿದೆ. ಮಾರ್ಚ್‌ ಅಥವಾ ಏಪ್ರಿಲ್‌ನಲ್ಲಿ ಬಳ್ಳಾರಿಯಲ್ಲಿ ಪ್ರಶಸ್ತಿ ವಿತರಣಾ ಸಮಾರಂಭ ನಡೆಯುವ ಸಾಧ್ಯತೆಗಳಿವೆ ಎಂದು ಅಕಾಡೆಮಿ ಅಧ್ಯಕ್ಷೆ ಗೀತಾ ನಾಗಭೂಷಣ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರ ವಿವರ :

  • ಡಾ.ಎಚ್‌.ಗಿರಿಜಮ್ಮ(ಬೆಂಗಳೂರು)
  • ಪ್ರೊ.ಕಾಳೇಗೌಡ ನಾಗವಾರ(ಮೈಸೂರು)
  • ಡಾ.ಕೃಷ್ಣಮೂರ್ತಿ ಕಿತ್ತೂರ(ಗುಲ್ಬರ್ಗ)
  • ಡಾ.ಆರ್‌.ವಿ.ಭಂಡಾರಿ(ಕೆರೆಕೋಣ, ಉತ್ತರ ಕನ್ನಡ ಜಿಲ್ಲೆ)
  • ಶಶಿಕಲಾ ವೀರಯ್ಯ ಸ್ವಾಮಿ(ವಿಜಾಪುರ)
ಅನುವಾದ ಅಕಾಡೆಮಿ ಪ್ರಶಸ್ತಿಗಳು : ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ 2005-06ನೇ ಸಾಲಿನ ಗೌರವ ಪ್ರಶಸ್ತಿಗಳನ್ನು ಘೋಷಿಸಿದೆ.

ಹಿರಿಯ ಸಾಹಿತಿ ಪ್ರೊ.ದೇ.ಜವರೇಗೌಡ, ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ, ಡಾ.ವಿ.ಪಿ.ದೇವಳಗಾಂವ್ಕ್‌ರ್‌,್‌ ವೀರಭದ್ರ, ಸರಸ್ವತಿ ರಿಸ್‌ಬೂಡ್‌ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X