ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಚ ಕೇಳಿದರೆ 9448146123ಕ್ಕೆ ಕರೆ ಮಾಡಿ -ಶೆಟ್ಟರ್‌ ಕರೆ

By Staff
|
Google Oneindia Kannada News

ಲಂಚ ಕೇಳಿದರೆ 9448146123ಕ್ಕೆ ಕರೆ ಮಾಡಿ -ಶೆಟ್ಟರ್‌ ಕರೆ
ಭ್ರಷ್ಟರ ವಿರುದ್ಧ ವೆಂಕಟಾಚಲ ಕೈಗೊಂಡಿರುವ ಸಮರಕ್ಕೆ ಸಚಿವರು ಜೀವ ತುಂಬುವರೇ?

ಬೆಂಗಳೂರು : ಮೊದಲ ಸಲ ಸಚಿವರೊಬ್ಬರು ಭ್ರಷ್ಟಾಚಾರದ ಬಗ್ಗೆ ಧ್ವನಿ ಬಿಚ್ಚಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ನೆರವು ನೀಡಲು ತಮ್ಮ ಸೆಲ್‌ಪೋನ್‌ ಸಂಖ್ಯೆಯನ್ನು ಪ್ರಕಟಿಸಿದ್ದಾರೆ.

ಭ್ರಷ್ಟರ ವಿರುದ್ಧ ಸಮರ ಸಾರಿರುವುದಾಗಿ ಸಚಿವ ಜಗದೀಶ್‌ ಶೆಟ್ಟರ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅದರ ಪರಿಣಾಮ ಕೆಲವೇ ದಿನಗಳಲ್ಲಿ ಬೆಳಕಿಗೆ ಬರಲಿದೆ.

ತಹಸೀಲ್ದಾರ್‌, ಜಿಲ್ಲಾಧಿಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಅಥವಾ ಸಿಬ್ಬಂದಿಗಳು ಲಂಚಕ್ಕೆ ಪೀಡಿಸಿದರೆ, ನೇರವಾಗಿ ನನ್ನ ಮೊಬೈಲ್‌(94481 46123) ಸಂಪರ್ಕಿಸಬಹುದು ಎಂದು ಜಗದೀಶ್‌ ಶೆಟ್ಟರ್‌ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.

ಲೋಕಾಯುಕ್ತರು ರಾಜ್ಯದ ವಿವಿಧೆಡೆ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳನ್ನು ಪತ್ತೆ ಹಚ್ಚಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಅವರ ಶಿಫಾರಸ್ಸನ್ನು ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಜಗದೀಶ್‌ ಶೆಟ್ಟರ್‌ ಹೇಳಿದರು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X