ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಣ್ಣು ಕುಸಿದು 5ಸಾವು : ಪರಿಹಾರಕ್ಕೆ ಕಾರ್ಮಿಕರ ಆಗ್ರಹ
ಮಣ್ಣು
ಕುಸಿದು
5ಸಾವು
:
ಪರಿಹಾರಕ್ಕೆ
ಕಾರ್ಮಿಕರ
ಆಗ್ರಹ
ಮಾರತ್ಹಳ್ಳಿಯಲ್ಲಿ
ದುರಂತ,
ಗುತ್ತಿಗೆದಾರರ
ವಿರುದ್ಧ
ದೂರು
ದಾಖಲು
ಮಾರತ್ಹಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ರೋಹನ್ ವಸಂತ್ ಅಪಾರ್ಟ್ಮೆಂಟ್ನ ಒಳ ಚರಂಡಿ ಕಾಮಗಾರಿ ನಡೆಯುತ್ತಿದ್ದಾಗ, ಈ ದುರಂತ ಮಂಗಳವಾರ ಸಂಭವಿಸಿದೆ. ಈ ಪರಿಣಾಮ ಒಂಬತ್ತು ಕಾರ್ಮಿಕರು ಮಣ್ಣಿನಲ್ಲಿ ಹೂತು ಹೋದರು. ಆನಂತರ ನಾಲ್ವರನ್ನು ಅಪಾಯದಿಂದ ಪಾರು ಮಾಡಲಾಗಿದ್ದು, ಘಟನೆಯಲ್ಲಿ ಓರ್ವ ಮಹಿಳೆ ಸೇರಿದಂತೆ ಐವರು ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ.
ಮೃತರನ್ನು ಆಂಧ್ರ ಮೂಲದವರೆಂದು ಗುರ್ತಿಸಲಾಗಿದೆ. ಕೂಲಿ ಕೆಲಸಕ್ಕಾಗಿ ಅವರು ಬೆಂಗಳೂರಿಗೆ ಬಂದಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಸ್ಥಿತಿ ತೀವ್ರ ಚಿಂತಾಜನಕವಾಗಿದೆ.
ಗುತ್ತಿಗೆದಾರರ ವಿರುದ್ಧ ನಿರ್ಲಕ್ಷ್ಯ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ. ಯಾವುದೇ ಭದ್ರತೆಯಿಲ್ಲದೆ ದುಡಿಯುವ ಕೂಲಿ ಕಾರ್ಮಿಕರಿಗೆ ನ್ಯಾಯ ದೊರಕುವುದೆ?
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Wednesday, February 22, 2006, 23:53 [IST]