ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ.ರಾ. ಮಿತ್ರ ಸೇರಿದಂತೆ 10ಮಂದಿಗೆ ಸಂದೇಶ ಪ್ರಶಸ್ತಿ

By Staff
|
Google Oneindia Kannada News

ಅ.ರಾ. ಮಿತ್ರ ಸೇರಿದಂತೆ 10ಮಂದಿಗೆ ಸಂದೇಶ ಪ್ರಶಸ್ತಿ
ಫೆ. 28ರಂದು ಎಂ.ವೀರಪ್ಪ ಮೊಯ್ಲಿ ಅವರಿಂದ ಪ್ರಶಸ್ತಿ ಪ್ರದಾನ ...

ಬೆಂಗಳೂರು: ಪ್ರಸಕ್ತ ಸಾಲಿನ 2006ನೇ ಸಾಲಿನ ಕರ್ನಾಟಕ ರಾಜ್ಯಮಟ್ಟದ ‘ಸಂದೇಶ ಪ್ರಶಸ್ತಿ’ಗೆ ಅ.ರಾ.ಮಿತ್ರ, ಡಿ.ಕೆ.ಚೌಟ ಸೇರಿದಂತೆ ಹತ್ತು ಮಂದಿ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯನ್ನು ಫೆಬ್ರವರಿ 28ರಂದು ಸಂದೇಶ ಪ್ರತಿಷ್ಠಾನದ ಆವರಣದಲ್ಲಿ ಸಂಜೆ 6ಗಂಟೆಗೆ ಪ್ರದಾನ ಮಾಡಲಾಗುತ್ತಿದೆ. ಮಂಗಳೂರು ಬಿಷಪ್‌ ರೆ.ಫಾ.ಡಾ. ಅಲೋಶಿಯಸ್‌ ಪಾವ್ಲ್‌ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಎಂ.ವೀರಪ್ಪ ಮೊಯ್ಲಿ ಪ್ರದಾನ ಮಾಡಲಿದ್ದಾರೆ.

ಪ್ರಶಸ್ತಿಯು ತಲಾ ಹತ್ತು ಸಾವಿರ ರೂಪಾಯಿ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಈ ರೀತಿ ಇದೆ :

  • ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ- ಅ.ರಾ.ಮಿತ್ರ

  • ತುಳು ಸಾಹಿತ್ಯ ಪ್ರಶಸ್ತಿ- ಡಿ.ಕೆ.ಚೌಟ

  • ಸಂದೇಶ ಕೊಂಕಣಿ ಸಾಹಿತ್ಯ ಪ್ರಶಸ್ತಿ- ವಿಲ್ಫಿ ರೆಬಿಂಬಸ್‌

  • ಸಂದೇಶ ಸಿನಿಮಾ ಪ್ರಶಸ್ತಿ - ಎಸ್‌.ಮೈನಾವತಿ

  • ಸಂದೇಶ ಕಲಾ ಪ್ರಶಸ್ತಿ - ಹೆಬ್ಬಣಿ ಮಾದಯ್ಯ

  • ಸಂದೇಶ ಪತ್ರಿಕೋದ್ಯಮ ಪ್ರಶಸ್ತಿ- ಬಾ.ಕಿ.ನ

  • ಸಂದೇಶ ಮಾಧ್ಯಮ ಶಿಕ್ಷಣ ಪ್ರಶಸ್ತಿ- ಹೊಸಪೇಟೆಯ ಭಾವೈಕ್ಯ ವೇದಿಕೆಯ ಪಿ.ಅಬ್ದುಲ್‌ ಮಜೀದ್‌,

  • ಸಂದೇಶ ಶಿಕ್ಷಕ ಪ್ರಶಸ್ತಿ - ಗೋಪಾಡ್ಕರ್‌

  • ಸಂದೇಶ ವಿಶೇಷ ಪ್ರಶಸ್ತಿ- ಡಾ.ಸಿ.ಆರ್‌.ಚಂದ್ರಶೇಖರ್‌ ಹಾಗೂ ಡಾ.ಬಿ.ಎಸ್‌.ತಲ್ವಾಡಿ

  • (ದಟ್ಸ್‌ ಕನ್ನಡ ವಾರ್ತೆ)

    ಮುಖಪುಟ / ವಾರ್ತೆಗಳು

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X