ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರ ಸಂಪುಟ : ಇಪ್ಪತ್ತು ಮಂದಿಗೆ ಸಚಿವ ಸ್ಥಾನದ ಭಾಗ್ಯ

By Staff
|
Google Oneindia Kannada News

ಕುಮಾರ ಸಂಪುಟ : ಇಪ್ಪತ್ತು ಮಂದಿಗೆ ಸಚಿವ ಸ್ಥಾನದ ಭಾಗ್ಯ
ಸಂಪುಟ ಕಸರತ್ತು : 11 ಬಿಜೆಪಿ, 9ಜೆಡಿಎಸ್‌ ಶಾಸಕರಿಗೆ ಮಂತ್ರಿ ಸ್ಥಾನ

ಬೆಂಗಳೂರು : ಬಿಜೆಪಿ-ಜೆಡಿಎಸ್‌ ಮೈತ್ರಿಕೂಟದ ಸರ್ಕಾರ ಸಂಪುಟವನ್ನು ಶುಕ್ರವಾರ ವಿಸ್ತರಿಸಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಸಚಿವ ಸಂಪುಟವನ್ನು 20ಮಂದಿ ಸಚಿವರು ಪ್ರವೇಶಿಸಿದ್ದಾರೆ.

ವಿಧಾನಸೌಧದ ಪೂರ್ವದ್ವಾರದ ಮೇಲೆ ನಿರ್ಮಾಣ ಮಾಡಲಾಗಿದ್ದ ವೇದಿಕೆಯ ಮೇಲೆ ಬಿಜೆಪಿಯ ಹನ್ನೊಂದು ಮಂದಿ ಮತ್ತು ಜೆಡಿಎಸ್‌ನ 9 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ತ್ರಿಲೋಕಿನಾಥ ಚತುರ್ವೇದಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಬಿಜೆಪಿ ಶಾಸಕರಾದ ಕೆ.ಎಸ್‌.ಈಶ್ವರಪ್ಪ, ಜಗದೀಶ್‌ ಶೆಟ್ಟರ್‌, ಡಿ.ಎಚ್‌. ಶಂಕರಮೂರ್ತಿ, ಸಿ.ರಾಮಚಂದ್ರಗೌಡ, ವಿ.ಎಸ್‌. ಆಚಾರ್ಯ, ಸಿ.ಎಂ.ಉದಾಸಿ, ಗೋವಿಂದ ಕಾರಜೋಳ, ಆರ್‌.ಅಶೋಕ್‌, ಕಟ್ಟಾ ಸುಬ್ರಮಣ್ಯ ನಾಯ್ಡು, ಡಿ.ಶ್ರೀರಾಮುಲು ಮತ್ತು ನಾಗರಾಜ ಶೆಟ್ಟಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಜೆಡಿಎಸ್‌ ಶಾಸಕರಾದ ಬಸವರಾಜ ಹೊರಟ್ಟಿ, ಸಿ.ಚನ್ನಿಗಪ್ಪ, ಡಿ.ಟಿ.ಜಯಕುಮಾರ್‌, ಚೆಲುವರಾಯಸ್ವಾಮಿ, ಇಕ್ಬಾಲ್‌ ಆನ್ಸಾರಿ, ಶರಣಬಸಪ್ಪ ದರ್ಶನಾಪುರ, ಬಂಡೆಪ್ಪ ಕಾಶೆಂಪುರ್‌, ಹನುಮಂತಪ್ಪ ಎಲ್ಲಪ್ಪ ಅಲ್ಕೋಡ್‌, ಬಾೆಚಂದ್ರ ಜಾರಕಿಹೊಳಿ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X