ಕುಮಾರ ಸಂಪುಟ : ಇಪ್ಪತ್ತು ಮಂದಿಗೆ ಸಚಿವ ಸ್ಥಾನದ ಭಾಗ್ಯ
ಕುಮಾರ
ಸಂಪುಟ
:
ಇಪ್ಪತ್ತು
ಮಂದಿಗೆ
ಸಚಿವ
ಸ್ಥಾನದ
ಭಾಗ್ಯ
ಸಂಪುಟ
ಕಸರತ್ತು
:
11
ಬಿಜೆಪಿ,
9ಜೆಡಿಎಸ್
ಶಾಸಕರಿಗೆ
ಮಂತ್ರಿ
ಸ್ಥಾನ
ವಿಧಾನಸೌಧದ ಪೂರ್ವದ್ವಾರದ ಮೇಲೆ ನಿರ್ಮಾಣ ಮಾಡಲಾಗಿದ್ದ ವೇದಿಕೆಯ ಮೇಲೆ ಬಿಜೆಪಿಯ ಹನ್ನೊಂದು ಮಂದಿ ಮತ್ತು ಜೆಡಿಎಸ್ನ 9 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ತ್ರಿಲೋಕಿನಾಥ ಚತುರ್ವೇದಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಬಿಜೆಪಿ ಶಾಸಕರಾದ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್, ಡಿ.ಎಚ್. ಶಂಕರಮೂರ್ತಿ, ಸಿ.ರಾಮಚಂದ್ರಗೌಡ, ವಿ.ಎಸ್. ಆಚಾರ್ಯ, ಸಿ.ಎಂ.ಉದಾಸಿ, ಗೋವಿಂದ ಕಾರಜೋಳ, ಆರ್.ಅಶೋಕ್, ಕಟ್ಟಾ ಸುಬ್ರಮಣ್ಯ ನಾಯ್ಡು, ಡಿ.ಶ್ರೀರಾಮುಲು ಮತ್ತು ನಾಗರಾಜ ಶೆಟ್ಟಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಜೆಡಿಎಸ್ ಶಾಸಕರಾದ ಬಸವರಾಜ ಹೊರಟ್ಟಿ, ಸಿ.ಚನ್ನಿಗಪ್ಪ, ಡಿ.ಟಿ.ಜಯಕುಮಾರ್, ಚೆಲುವರಾಯಸ್ವಾಮಿ, ಇಕ್ಬಾಲ್ ಆನ್ಸಾರಿ, ಶರಣಬಸಪ್ಪ ದರ್ಶನಾಪುರ, ಬಂಡೆಪ್ಪ ಕಾಶೆಂಪುರ್, ಹನುಮಂತಪ್ಪ ಎಲ್ಲಪ್ಪ ಅಲ್ಕೋಡ್, ಬಾೆಚಂದ್ರ ಜಾರಕಿಹೊಳಿ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು