ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾರ್‌ನಲ್ಲಿ ಕಳಪೆ ಮದ್ಯ : 3 ಸಾವು, 20 ಮಂದಿ ಅಸ್ವಸ್ಥ

By Staff
|
Google Oneindia Kannada News

ಬಾರ್‌ನಲ್ಲಿ ಕಳಪೆ ಮದ್ಯ : 3 ಸಾವು, 20 ಮಂದಿ ಅಸ್ವಸ್ಥ
ಕಳಪೆ ಮದ್ಯ ಸೇವಿಸಿ ಮೃತಪಟ್ಟವರಿಗೆ ಪರಿಹಾರ ಧನ ನೀಡಿ -ಸಾರ್ವಜನಿಕರ ಆಗ್ರಹ

ಬೆಂಗಳೂರು : ನಕಲಿ ಸಾರಾಯಿ ದುರಂತಗಳ ಬೆನ್ನಲ್ಲಿ, ನಗರದ ಶ್ರೀರಾಂಪುರದ ಬಾರ್‌ ಒಂದರಲ್ಲಿ ಕಳಪೆ ಮದ್ಯ ಸೇವಿಸಿದ ಮೂವರು ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಶ್ರೀರಾಂಪುರದ ಶ್ರೀನಿವಾಸ ಬಾರ್‌ನಲ್ಲಿ ಗುರುವಾರ ರಾತ್ರಿ ಮದ್ಯ ಸೇವಿಸಿದ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತಪಟ್ಟವರನ್ನು ರಾಜೇಶ್‌ ಕುಮಾರ್‌(25), ದಾಸಪ್ಪ (25), ಚಂದ್ರಶೇಖರ್‌(70) ಎಂದು ಗುರ್ತಿಸಲಾಗಿದೆ.

ಆಕ್ರೋಶ : ವಿಷಯ ತಿಳಿಯುತ್ತಿದ್ದಂತೆ ಸಾರ್ವಜನಿಕರು ಶ್ರೀನಿವಾಸ್‌ ಬಾರ್‌ ಮೇಲೆ ದಾಳಿ ಮಾಡಿದರು. ಬಾರ್‌ಗೆ ಬೆಂಕಿ ಹಚ್ಚಿದರು. ಈ ಬಾರ್‌ ಮಾಲೀಕರ ಸುಪ್ರಭಾತ ಬಾರ್‌ಗೂ ನುಗ್ಗಿ, ಬಾಟಲಿ ಸೇರಿದಂತೆ ಇತರೆ ವಸ್ತುಗಳನ್ನು ಬೀದಿಗೆ ಎಸೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಲಾಠಿ ಪ್ರಹಾರದಿಂದ ಗುಂಪನ್ನು ಚದುರಿಸಲಾಯಿತು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X