ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹಿರಿಯ ಕವಿ ಸಿಪಿಕೆ ಅವರಿಗೆ ಪರಮೇಶ್ವರ ಭಟ್ಟರ ಪುರಸ್ಕಾರ
ಹಿರಿಯ
ಕವಿ
ಸಿಪಿಕೆ
ಅವರಿಗೆ
ಪರಮೇಶ್ವರ
ಭಟ್ಟರ
ಪುರಸ್ಕಾರ
ಮಂಗಳೂರಿನ
ಕೆನರಾ
ಕಾಲೇಜಿನಲ್ಲಿ
ಫೆ.18ರಂದು
ಪ್ರಶಸ್ತಿ
ಪ್ರಧಾನ
ಕವಿ ಪ್ರೊ.ಎಸ್.ವಿ.ಪರಮೇಶ್ವರ ಭಟ್ಟ ಅವರ ವಿದ್ಯಾರ್ಥಿಗಳು ಮತ್ತು ಅಭಿಮಾನಿಗಳು ಎಸ್ವಿಪಿ ಸಮಿತಿಯನ್ನು ರಚಿಸಿ, ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ. ಫೆ.18ರಂದು ಸಂಜೆ 5ಗಂಟೆಗೆ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಏರ್ಪಡಿಸಲಾಗಿದೆ.
ಸಿ.ಪಿ.ಕೆ ಎಂದೇ ಜನಪ್ರಿಯರಾಗಿರುವ ಕೃಷ್ಣಕುಮಾರ್, ಮೈಸೂರು ವಿ.ವಿ.ಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ, ಮೈಸೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಮಂಗಳೂರು ಸ್ವಾತಕೋತ್ತರ ಕೇಂದ್ರದ ಸಂಸ್ಥಾಪನಾ ನಿರ್ದೇಶರಾಗಿ ಅವರು ಈ ಹಿಂದೆ ಸೇವೆ ಸಲ್ಲಿಸಿದ್ದಾರೆ. ವಿಮರ್ಶೆ, ಕಾವ್ಯ, ಅನುವಾದ, ಸಂಪಾದನೆ, ವೈಚಾರಿಕ ಲೇಖನಗಳು ಸೇರಿದಂತೆ ಸಾಹಿತ್ಯದ ವಿವಿಧ ವಿಭಾಗಗಳಲ್ಲಿ ಸಿ.ಪಿ.ಕೆ. ಕೃಷಿ ಮಾಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Story first published: Wednesday, February 15, 2006, 23:53 [IST]