ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲೆ-ಕೊಲೆ : ಹುಸೇನ್‌ ವಿರುದ್ಧ ಮಂಡ್ಯದಲ್ಲಿ ಪ್ರತಿಭಟನೆ

By Staff
|
Google Oneindia Kannada News

ಕಲೆ-ಕೊಲೆ : ಹುಸೇನ್‌ ವಿರುದ್ಧ ಮಂಡ್ಯದಲ್ಲಿ ಪ್ರತಿಭಟನೆ
ಕಲೆಯ ಹೆಸರಲ್ಲಿ ವಿಕೃತಿ ಬಿಂಬಿಸುವ ಹುಸೇನ್‌ ಹುಚ್ಚಾಟಕ್ಕೆ ಕಡಿವಾಣ ಹಾಕಿ -ಬಿಜೆಪಿ

ಮಂಡ್ಯ : ಭಾರತ ಮಾತೆಯನ್ನು ಅಸಭ್ಯವಾಗಿ ಚಿತ್ರಿಸಿದ ಕಲಾವಿದ ಎಂ.ಎಫ್‌.ಹುಸೇನ್‌ ವಿರುದ್ಧ ನಗರದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ವಿಶ್ವಹಿಂದೂ ಪರಿಷತ್‌, ಭಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರು ಬೆಂಗಳೂರು-ಮೈಸೂರು ರಸ್ತೆಯಲ್ಲಿ ಹುಸೇನ್‌ ಪ್ರತಿಕೃತಿ ದಹಿಸಿ, ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಹಿಂದೂ ದೇವತೆಗಳಾದ ಸರಸ್ವತಿ, ಸೀತಾ ಅವರ ಅರೆನಗ್ನ ಚಿತ್ರ ರಚಿಸಿ, ಹುಸೇನ್‌ ಈ ಹಿಂದೆ ವಿವಾದ ಸೃಷ್ಟಿಸಿದ್ದರು. ಈಗ ಭಾರತಮಾತೆಯ ಅರೆನಗ್ನ ಚಿತ್ರ ರಚಿಸಿ, ತಮ್ಮ ವಿಕೃತಿಯನ್ನು ಹುಸೇನ್‌ ಬಯಲಿಗಿಟ್ಟಿದ್ದಾರೆ. ಅವರ ವಿರುದ್ಧ ಸರ್ಕಾರ ಗಂಭೀರ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಚ್‌.ಹೊನ್ನಪ್ಪ, ಭಜರಂಗದಳದ ಸದಸ್ಯರಾದ ಎಂ.ಗಿರೀಶ್‌ ಕುಮಾರ್‌, ಬಾಲಕೃಷ್ಣ , ಶ್ರೀಕಾಂತಸ್ವಾಮಿ, ಕ್ರಾಂತಿ ಮಂಜು, ನಂದಕಿಶೋರ್‌ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X