ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರವಣಬೆಳಗೊಳಕ್ಕೆಉಪ ರಾಷ್ಟ್ರಪತಿ ಭೇಟಿ, ಗೌಡರ ಅನುಪಸ್ಥಿತಿ?

By Staff
|
Google Oneindia Kannada News

ಶ್ರವಣಬೆಳಗೊಳಕ್ಕೆಉಪ ರಾಷ್ಟ್ರಪತಿ ಭೇಟಿ, ಗೌಡರ ಅನುಪಸ್ಥಿತಿ?
ಮಗನೊಂದಿಗೆ ವೇದಿಕೆ ಹಂಚಿಕೊಳ್ಳಲು ಮಾಜಿ ಪ್ರಧಾನಿ ದೇವೇಗೌಡ ನಕಾರ

ಬೆಂಗಳೂರು : ಅಪ್ಪ-ಮಗನ ಜಗಳ ಇನ್ನು ಶಾಂತವಾಗಿಲ್ಲ. ಈ ಮಧ್ಯೆ ತಮ್ಮ ಪುತ್ರನೊಂದಿಗೆ ವೇದಿಕೆ ಹಂಚಿಕೊಳ್ಳಬೇಕಾದ ಇಕ್ಕಟ್ಟಿನ ಪರಿಸ್ಥಿತಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರಿಗೆ ಬಂದಿದೆ.

ಸೋಮವಾರ ಶ್ರವಣಬೆಳಗೊಳದಲ್ಲಿ ಆಧಿನಾಥ ಪಂಚಕಲ್ಯಾಣ ಉತ್ಸವ ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಭೈರೋನ್‌ಸಿಂಗ್‌ ಶೇಖಾವತ್‌, ರಾಜ್ಯಪಾಲ ಟಿ.ಎನ್‌.ಚತುರ್ವೇದಿ ಅವರೊಂದಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪಾಲ್ಗೊಳ್ಳುತ್ತಿದ್ದಾರೆ.

ಈ ಸಮಾರಂಭದಲ್ಲಿ ಪಾಲ್ಗೊಳ್ಳುವ ಮುಖ್ಯ ಅತಿಥಿಗಳಲ್ಲಿ ದೇವೇಗೌಡರು ಒಬ್ಬರಾಗಿದ್ದು, ತಮ್ಮ ಪುತ್ರನೊಂದಿಗೆ ವೇದಿಕೆ ಮೇಲೇರಲು ಅವರ ಮನಸ್ಸು ಒಪ್ಪುತ್ತಿಲ್ಲ. ಹೀಗಾಗಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳು ಅತಿ ಕಡಿಮೆ ಎಂದು ಗೌಡರ ಆಪ್ತ ಮೂಲಗಳು ತಿಳಿಸಿವೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X