ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾನೂನು ತೊಡಕು ನಿವಾರಣೆ, ದೋಸ್ತಿ ಸರ್ಕಾರಕ್ಕೆ ಖುಷಿ

By Staff
|
Google Oneindia Kannada News

ಕಾನೂನು ತೊಡಕು ನಿವಾರಣೆ, ದೋಸ್ತಿ ಸರ್ಕಾರಕ್ಕೆ ಖುಷಿ
ನಾವು ಕಾನೂನು ಸಮರ ಮುಂದುವರೆಸುತ್ತೇವೆ - ಸಿದ್ದರಾಮಯ್ಯ

ಬೆಂಗಳೂರು : ನೂತನ ಸರ್ಕಾರ ರಚನೆಯಲ್ಲಿ, ರಾಜ್ಯ ಹೈಕೋರ್ಟ್‌ ಅನಗತ್ಯವಾಗಿ ಮಧ್ಯ ಪ್ರವೇಶಿಸಲು ನಿರಾಕರಿಸಿರುವುದರಿಂದ, ಎಚ್‌.ಡಿ.ಕುಮಾರಸ್ವಾಮಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸುವ ಪ್ರಕ್ರಿಯೆ ಸರಾಗವಾಗಿದೆ.

ಕುಮಾರಸ್ವಾಮಿ ಅವರನ್ನು ಜೆಡಿಎಲ್‌ಪಿ ನಾಯಕರೆಂದು ಮಾನ್ಯ ಮಾಡಿರುವ ಸ್ಪೀಕರ್‌ ಅವರ ಧೋರಣೆಯನ್ನು ನಿಯಮ ಬಾಹೀರವಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ. ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್‌ನ 35ಶಾಸಕರ ಅನರ್ಹತೆಗೆ ಒತ್ತಾಯಿಸಿ ಹಾಗೂ ಸ್ಪೀಕರ್‌ ನಿರ್ಣಯ ಪ್ರಶ್ನಿಸಿ ವಾಟಾಳ್‌ ನಾಗರಾಜ್‌, ಜಿ.ವಿ.ಶ್ರೀರಾಮರೆಡ್ಡಿ ಅರ್ಜಿ ಸಲ್ಲಿಸಿದ್ದರು.

ಸಿದ್ದರಾಮಯ್ಯ ಪ್ರತಿಕ್ರಿಯೆ : ಕುಮಾರಸ್ವಾಮಿ ಅವರನ್ನು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕರೆಂದು ಮಾನ್ಯ ಮಾಡುವಂತಿಲ್ಲ. ಈ ಹಿನ್ನೆಲೆಯಲ್ಲಿ ನಾವು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದೇವೆ. ಕಾನೂನು ಸಮರ ಮುಂದುವರೆಯಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X