ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗೆ ಹಂಚಿದ ಲೇಖಕಿ ತುಮಕೂರು ಸುನಂದಮ್ಮ ಇನ್ನಿಲ್ಲ

By Staff
|
Google Oneindia Kannada News

ನಗೆ ಹಂಚಿದ ಲೇಖಕಿ ತುಮಕೂರು ಸುನಂದಮ್ಮ ಇನ್ನಿಲ್ಲ
ಕೊರವಂಜಿ ಮೂಲಕ ಹಾಸ್ಯ ಕೃಷಿ ಆರಂಭಿಸಿದ ಸುನಂದಮ್ಮ ಅವರ ಲೇಖನಿಗೆ ಈಗ ಬಿಡುವು!!

ಬೆಂಗಳೂರು : ಹೃದಯಾಘಾತದಿಂದ ಮೃತಪಟ್ಟ ಕನ್ನಡದ ಮೊದಲ ಹಾಸ್ಯಬರಹಗಾರ್ತಿ ಟಿ.ಸುನಂದಮ್ಮ(89) ಅವರ ಅಂತ್ಯಕ್ರಿಯೆ, ಶನಿವಾರ ನಗರದಲ್ಲಿ ನೆರವೇರಿತು.

ನಗರದ ವೈಯಾಲಿಕಾವಲ್‌ನಲ್ಲಿರುವ ತಮ್ಮ ಸ್ವಗೃಹದಲ್ಲಿ, ಹೃದಯಾಘಾತದಿಂದ ಶುಕ್ರವಾರ ರಾತ್ರಿ ಅವರು ಮೃತಪಟ್ಟರು.

ಕೊರವಂಜಿ ಹಾಸ್ಯಪತ್ರಿಕೆ ಸೇರಿದಂತೆ ನಾಡಿನ ವಿವಿಧ ಪತ್ರಿಕೆಗಳ ಮೂಲಕ ಮನೆಮಾತಾಗಿದ್ದ ಟಿ.ಸುನಂದಮ್ಮ, ಪರಿಶುದ್ಧ ಹಾಸ್ಯವನ್ನು ಓದುಗರಿಗೆ ಉಣಬಡಿಸಿದ್ದರು. ಭಂಜದ ಚೀಲ, ಬಣ್ಣದ ಚಿಟ್ಟೆ, ಪೆಪ್ಪರ್‌ಮೆಂಟ್‌ ಸುನಂದಮ್ಮ ಅವರ ಪ್ರಮುಖ ಕೃತಿಗಳು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದಾನಚಿಂತಾಮಣಿ ಪುರಸ್ಕಾರ, ಅನುಪಮ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ವಿವಿಧ ಪುರಸ್ಕಾರಗಳು ಅವರಿಗೆ ಸಂದಿದ್ದವು. ತುಮಕೂರು ಸುನಂದಮ್ಮ ಎಂದೇ ಅವರು ಸಾಹಿತ್ಯವಲಯದಲ್ಲಿ ಪರಿಚಿತರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X