ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಯಪಾಲರ ಕೈಯಲ್ಲಿ ಧರ್ಮಸಿಂಗ್ ಸರ್ಕಾರದ ಭವಿಷ್ಯ
ರಾಜ್ಯಪಾಲರ
ಕೈಯಲ್ಲಿ
ಧರ್ಮಸಿಂಗ್
ಸರ್ಕಾರದ
ಭವಿಷ್ಯ
ಸರ್ಕಾರ
ರಚನೆಗೆ
ಆಹ್ವಾನ
ಪಡೆಯಲು
ಬಿಜೆಪಿ
ಮತ್ತು
ಜೆಡಿಎಸ್
ಪ್ರಯತ್ನ
ವಿಶ್ವಾಸ ಮತ ಸಾಬೀತು ಪ್ರಕ್ರಿಯೆ, ವಿಧಾನಸಭೆಯಲ್ಲಿ ಶುಕ್ರವಾರ ಗದ್ದಲಕ್ಕೆ ಕಾರಣವಾಯಿತು. ಈ ಹಿನ್ನೆಲೆಯಲ್ಲಿ ವಿಧಾನಸಭಾಧ್ಯಕ್ಷ ಕೃಷ್ಣ ಸದನವನ್ನು ಮುಂದೂಡಿದ್ದಾರೆ.
ಶುಕ್ರವಾರ ರಾತ್ರಿ ರಾಜ್ಯಪಾಲರನ್ನು ಭೇಟಿ ಮಾಡಿದ ಧರ್ಮಸಿಂಗ್, ವಿಶ್ವಾಸ ಮತ ಸಾಬೀತಿಗೆ ಇನ್ನೆರಡು ದಿನಗಳ ಅವಕಾಶ ಕೇಳಿದ್ದಾರೆ. ಮತ್ತೊಂದು ಕಡೆ, ರಾಜಭವನದ ಮುಂದೆ ತಮ್ಮ ಸಂಖ್ಯಾಬಲ ಪ್ರದರ್ಶಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು, ಧರಂ ಸರ್ಕಾರವನ್ನು ವಜಾಗೊಳಿಸಲು ಒತ್ತಾಯಿಸಿದ್ದಾರೆ. ಅಲ್ಲದೇ ಸರ್ಕಾರ ರಚನೆಗೆ ಅವಕಾಶ ಕೋರಿದ್ದಾರೆ.
ಚೆಂಡು ಈಗ ರಾಜ್ಯಪಾಲರ ಅಂಗಳದಲ್ಲಿದ್ದು, ಅವರು ಶನಿವಾರ ಸಂಜೆಯ ವೇಳೆಗೆ ತಮ್ಮ ನಿರ್ಧಾರ ಪ್ರಕಟಿಸುವ ಸಾಧ್ಯತೆಗಳಿವೆ.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ
Comments
Story first published: Saturday, January 28, 2006, 23:53 [IST]