ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಇನ್ಫೋಸಿಸ್‌ ನಾಯಣಮೂರ್ತಿ ನಿಜಕ್ಕೂ ಕಪ್ಪು ಆಂಗ್ಲ ’

By Staff
|
Google Oneindia Kannada News

‘ಇನ್ಫೋಸಿಸ್‌ ನಾಯಣಮೂರ್ತಿ ನಿಜಕ್ಕೂ ಕಪ್ಪು ಆಂಗ್ಲ ’
ಪ್ರತಿಭೆಯಾಂದೆ ಮಾನದಂಡವಲ್ಲ, ಮೀಸಲಾತಿ ಅತ್ಯಗತ್ಯ -ಶ್ರೀನಿವಾಸ ಪ್ರಸಾದ್‌

ಮೈಸೂರು : ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್‌, ಮೀಸಲಾತಿ ಬೇಡ ಎನ್ನುವ ಇನ್ಫೋಸಿಸ್‌ ನಾರಾಯಣಮೂರ್ತಿ ವಿರುದ್ಧ ಕಿಡಿಗಾರಿದ್ದು, ನಾರಾಯಣಮೂರ್ತಿ ಬ್ರಿಟಿಷರ ಪ್ರತಿರೂಪ ಎಂದು ಅಭಿಪ್ರಾಯಪಟ್ಟಿದ್ದಾರೆ.

ಡಾ.ಬಿ.ಆರ್‌.ಅಂಬೇಡ್ಕರ್‌ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ದಲಿತ ನೌಕರರ ಒಕ್ಕೂಟ ಗಣರಾಜ್ಯೋತ್ಸವದ ಹಿನ್ನೆಲೆ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಖಾಸಗಿ ಸಂಸ್ಥೆಗಳಲ್ಲಿ ಮೀಸಲಾತಿ ಕಲ್ಪಿಸಲು ನಾರಾಯಣಮೂರ್ತಿ ವಿರೋಧ ವ್ಯಕ್ತಪಡಿಸಿದ್ದಾರೆ. ಬ್ರಿಟಿಷರಿಗೂ ಅವರಿಗೂ ಯಾವುದೇ ವ್ಯತ್ಯಾಸವಿಲ್ಲ. ಅವರೊಬ್ಬ ಕಪ್ಪು ಆಂಗ್ಲ. ಪ್ರತಿಭೆಯಾಂದೇ ಮಾನದಂಡ ಎನ್ನುವ ನಾರಾಯಣಮೂರ್ತಿ ನಿಲುವು ಅಪಾಯಕಾರಿ. ಅಂದು ಒಬ್ಬ ಅಂಬೇಡ್ಕರ್‌ ಇದ್ದರು. ಇಂದು ಲಕ್ಷಾಂತರ ಅಂಬೇಡ್ಕರ್‌ಗಳಿದ್ದು, ಅವರಿಗೆ ಅವಕಾಶ ನೀಡಬೇಕು ಎಂದು ಶ್ರೀನಿವಾಸ ಪ್ರಸಾದ್‌ ಹೇಳಿದರು.

ಸಮಾರಂಭದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಎ.ಶಶಿಧರ್‌ ಪ್ರಸಾದ್‌, ಡಾ.ಸಿದ್ದಲಿಂಗಯ್ಯ, ಮೊಗಳ್ಳಿ ಗಣೇಶ್‌ ಮತ್ತಿತರರು ಹಾಜರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X