ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯಾಡನೆ ಕೈಜೋಡಿಸದಿರಲು ಕುಮಾರಣ್ಣನಿಗೆ ಮತ್ತೆ ಮನವಿ

By Staff
|
Google Oneindia Kannada News

ಬಿಜೆಪಿಯಾಡನೆ ಕೈಜೋಡಿಸದಿರಲು ಕುಮಾರಣ್ಣನಿಗೆ ಮತ್ತೆ ಮನವಿ
ನನಗೆ ಆಘಾತವಾಗಿದೆ, ನನ್ನ ವ್ಯಕ್ತಿತ್ವಕ್ಕೆ ಕುಂದುಂಟಾಗಿದೆ -ದೇವೇಗೌಡ

ಬೆಂಗಳೂರು : ಬಿಜೆಪಿಯಾಂದಿಗೆ ಕೈಜೋಡಿಸುವ ಯೋಚನೆ ಕೈಬಿಟ್ಟು, ಪಕ್ಷದ ಜಾತ್ಯತೀತ ಮೌಲ್ಯ ಎತ್ತಿಹಿಡಿಯಬೇಕು ಎಂದು ತಮ್ಮ ಪಕ್ಷದ ಶಾಸಕರಿಗೆ ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಕೊನೆಯ ಬಾರಿಗೆ ಮನವಿ ಮಾಡಿದ್ದಾರೆ.

ಶುಕ್ರವಾರ, ಜೆಡಿಎಸ್‌ ಬಂಡಾಯ ನಾಯಕ ಎಚ್‌.ಡಿ.ಕುಮಾರಸ್ವಾಮಿ ಬಣದ ಶಾಸಕರುಗಳಿಗೆ ಪ್ರತ್ಯೇಕವಾಗಿ ಪತ್ರ ಬರೆದಿರುವ ಅವರು ಈ ರೀತಿ ಮನವಿ ಮಾಡಿದ್ದಾರೆ.

ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿದ್ದೇನೆ. ಇತ್ತೀಚೆಗಿನ ಕೆಲವು ಬೆಳವಣಿಗೆಗಳು ನಿಮಗೆ ನೋವುಂಟುಮಾಡಿವೆ ಎಂದು ನನಗೆ ಗೊತ್ತಿದೆ. ಆದರೆ ಬಿಜೆಪಿಯಾಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಬೇಕೆಂಬ ನಿಮ್ಮ ನಿಲುವು ನಿಮಗೆ ಸರಿ ಎನಿಸಿರಬಹುದು. ಆದರೆ ಈ ಬೆಳವಣಿಗೆಯಿಂದ ನನಗೆ ಆಘಾತವಾಗಿದ್ದು, ನನ್ನ ವ್ಯಕ್ತಿತ್ವಕ್ಕೆ ಕುಂದುಂಟಾಗಿದೆ ಎಂದು ವಿಷಾದಿಸಿದ್ದಾರೆ.

ಪಕ್ಷ ಎಲ್ಲಕ್ಕಿಂತ ಮಿಗಿಲಾದುದು. ಪಕ್ಷದ ಸಿದ್ಧಾಂತ ಎತ್ತಿಹಿಡಿಯಲು ಇದು ಸಕಾಲ. ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಧರ್ಮಸಿಂಗ್‌ ವಿಶ್ವಾಸ ಯಾಚಿಸುವ ಮೊದಲೇ ನಿಮ್ಮ ನಿರ್ಧಾರ ಹಿಂತೆಗೆದುಕೊಳ್ಳಿ ಎಂದು ವಿನಂತಿಸಿದ್ದಾರೆ.

ವಿದ್ಯುತ್‌ ಮತ್ತು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ತಮ್ಮ ಕಿರಿಯ ಸೋದರ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ, ಬಿಜೆಪಿಯಾಂದಿಗೆ ಕೂಡಿ ಸರ್ಕಾರ ರಚಿಸುವ ವಿಚಾರ ಬಿಟ್ಟುಬಿಡು ಎಂದು ಕೊನೆಯ ಮನವಿ ಮಾಡಿರುವುದಾಗಿ ಮೂಲಗಳು ತಿಳಿಸಿವೆ.

ರಾಜ್ಯ ರಾಜಕಾರಣದ ವಿವಿಧ ತುಣುಕುಗಳು :

  • ವಿಶ್ವಾಸ ಮತ ಯಾಚನೆ ಹಿನ್ನೆಲೆ ಸಂಜೆ ನಾಲ್ಕು ಗಂಟೆಗೆ ಮತ್ತೆ ಸದನ ಆರಂಭಗೊಂಡಿದ್ದು, ಸದಸ್ಯರ ಕೂಗಾಟ ಮತ್ತು ಗದ್ದಲದಿಂದ ಸಭಾಧ್ಯಕ್ಷರಿಗೆ ಗೊಂದಲ.
  • ಅನಂತಕುಮಾರ್‌ರಿಂದ ರಾಜ್ಯಪಾಲರ ಭೇಟಿ.
  • ಮಹಾರಾಷ್ಟ್ರ ಮಾದರಿಯಲ್ಲಿ ಸರ್ಕಾರ ರಚಿಸೋಣ. ಸಮ್ಮಿಶ್ರ ಸರ್ಕಾರ ಬೆಂಬಲಿಸಿ - ಕಾಂಗ್ರೆಸ್‌
(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X