ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರಂ ಸರ್ಕಾರ ಪತನಕ್ಕೆ ಕ್ಷಣಗಣನೆ, ಕುಮಾರ ಬಿಗಿ ಪಟ್ಟು

By Staff
|
Google Oneindia Kannada News

ಧರಂ ಸರ್ಕಾರ ಪತನಕ್ಕೆ ಕ್ಷಣಗಣನೆ, ಕುಮಾರ ಬಿಗಿ ಪಟ್ಟು
ಕುಟುಂಬ ಸೌಖ್ಯಕ್ಕಿಂತಲೂ, ಪಕ್ಷದ ಸೌಖ್ಯವೇ ಮುಖ್ಯ -ಕುಮಾರಸ್ವಾಮಿ

ಬೆಂಗಳೂರು : ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಧರ್ಮಸಿಂಗ್‌ ಸರ್ಕಾರವನ್ನು ಕೆಡವಿ, ಬಿಜೆಪಿ ಜೊತೆ ಸರ್ಕಾರ ರಚಿಸುವುದು ಖಚಿತ ಎಂದು ಎಚ್‌.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡುತ್ತಿದ್ದ ಅವರು, ನನ್ನ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಪಕ್ಷವನ್ನು ರಕ್ಷಿಸುವ ಪ್ರಶ್ನೆ ನನ್ನ ನಿರ್ಣಯದಲ್ಲಿದೆ ಎಂದರು.

ಕುಟುಂಬಕ್ಕಿಂತಲೂ ಪಕ್ಷದ ರಕ್ಷಣೆ ನನಗೆ ಮುಖ್ಯವೆನ್ನಿಸಿದೆ. ನಾನೀಗ ಏನನ್ನು ಮಾಡುವಂತಿಲ್ಲ. ಸರ್ಕಾರದ ವಿರುದ್ಧ ನಿಲ್ಲುವುದು ಅನಿವಾರ್ಯವಾಗಿದೆ ಎಂದರು.

ಗೌಡರ ಪತ್ರ : ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಕೂಟದ ಸರ್ಕಾರ ಉಳಿಸಲು ಅಂತಿಮ ಯತ್ನವಾಗಿ, ಮಾಜಿ ಪ್ರಧಾನಿ ದೇವೇಗೌಡರು ಕುಮಾರಸ್ವಾಮಿ ಸೇರಿದಂತೆ, ಜೆಡಿಎಸ್‌ನ ಶಾಸಕರಿಗೆ ಪತ್ರ ಬರೆದು, ಮನಬದಲಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

(ಪಿಟಿಐ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X