ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ಭೀತಿಯ ನಡುವೆ ಮತ್ತೊಂದು ಗಣರಾಜ್ಯೋತ್ಸವ

By Staff
|
Google Oneindia Kannada News

ಉಗ್ರರ ಭೀತಿಯ ನಡುವೆ ಮತ್ತೊಂದು ಗಣರಾಜ್ಯೋತ್ಸವ
2000 ಪೊಲೀಸರಿಂದ ಬಿಗಿ ಭದ್ರತೆ, ಮಾಣಿಕ್‌ಷಾ ಮೈದಾನದಲ್ಲಿ ಕವಾಯತು

ಬೆಂಗಳೂರು : ಉಗ್ರರ ಭೀತಿಯ ನಡುವೆಯೇ ಗುರುವಾರ ಮತ್ತೊಂದು ಗಣರಾಜ್ಯೋತ್ಸ ವ. ಶಾಂತಿ ಸುವ್ಯವಸ್ಥೆಗಾಗಿ 2000 ಪೊಲೀಸರನ್ನು ನಗರದಲ್ಲಿ ಬಳಸಿಕೊಳ್ಳಲಾಗುತ್ತಿದೆ.

ಭದ್ರತೆ ಬಗೆಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಹೆಚ್ಚುವರಿ ಪೊಲೀಸ್‌ ಕಮೀಷನರ್‌ ಎಚ್‌.ಸಿ.ಕಿಶೋರ್‌ ಚಂದ್ರ, 1500 ಪೊಲೀಸರು, 17ಎಸಿಪಿಗಳು ಮತು 40 ಮಂದಿ ಇನ್ಸ್‌ಪೆಕ್ಟರ್‌ಗಳನ್ನು ಪೆರೇಡ್‌ ಮೈದಾನದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದ ಹಿನ್ನೆಲೆ ನಿಯೋಜಿಸಲಾಗಿದೆ ಎಂದರು.

ಕರ್ನಾಟಕ ರಾಜ್ಯ ರಿಸರ್ವ್‌ ಪೊಲೀಸರು, ತ್ವರಿತ ಕಾರ್ಯಾಚರಣೆ ತಂಡಗಳನ್ನು ಸಹಾ ಬಳಸಿಕೊಳ್ಳಲಾಗುತ್ತಿದೆ. ಉಗ್ರರ ಬೆದರಿಕೆ ಹಿನ್ನೆಲೆ ಬಿಗಿಬಂದೋಬಸ್ತು ಅನಿವಾರ್ಯ . ಫೀಲ್ಡ್‌ ಮಾರ್ಷಲ್‌ ಮಾಣಿಕ್‌ಷಾ ಮೈದಾನದಲ್ಲಿ ಕವಾಯತು ನಡೆಯಲಿದೆ. ಈ ಕಾರ್ಯಕ್ರಮ ವೀಕ್ಷಿಸಲು ಆಗಮಿಸುವ ಸಾರ್ವಜನಿಕರು, ಕ್ಯಾಮರಾ, ರೇಡಿಯೋ, ಕೊಡೆ, ಗಾಜಿನ ಬಾಟಲಿ ಮತ್ತಿತರ ಸಾಧನಗಳನ್ನು ತರುವುದನ್ನು ನಿರ್ಬಂಧಿಸಲಾಗಿದೆ ಎಂದು ಕಿಶೋರ್‌ ಚಂದ್ರ ತಿಳಿಸಿದರು.

(ಪಿಟಿಐ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X