ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೋಣಿ ಮಗುಚಿ 11ಮಂದಿ ಕಪಿಲಾ ನದಿಯಲ್ಲಿ ಲೀನ

By Staff
|
Google Oneindia Kannada News

ದೋಣಿ ಮಗುಚಿ 11ಮಂದಿ ಕಪಿಲಾ ನದಿಯಲ್ಲಿ ಲೀನ
ಕೇರಳಕ್ಕೆ ತೆರಳುತ್ತಿದ್ದ ನಾಡ ದೋಣಿ ಗುರಿ ಸೇರಲೇ ಇಲ್ಲ... ಒಂಭತ್ತು ಜನ ಅಪಾಯದಿಂದ ಪಾರು

ಎಚ್‌.ಡಿ. ಕೋಟೆ : ಡಿ.ಬಿ.ಕುಪ್ಪೆ ಸಮೀಪದ ಕಪಿಲಾನದಿಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ದೋಣಿ ದುರಂತದಲ್ಲಿ 11ಮಂದಿ ಕ ಕಣ್ಮರೆಯಾಗಿರುವುದು ಬುಧವಾರ ವರದಿಯಾಗಿದೆ.

ಎಚ್‌.ಡಿ.ಕೋಟೆಯಿಂದ ಸುಮಾರು 45 ಕಿ.ಮಿ. ದೂರದಲ್ಲಿರುವ ನದಿ ತೀರದ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಣ್ಮರೆಯಾಗಿರುವ ಮಂದಿ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದ್ದು, ಈ ದೋಣಿಯಲ್ಲಿದ್ದ ಹೆಚ್ಚಿನವರು ಕೂಲಿ ಕಾರ್ಮಿಕರಾಗಿದ್ದಾರೆ ಎಂದು ಹೇಳಲಾಗಿದೆ.

ಕುಪ್ಪೆ ದಡದಿಂದ ಹೊರಟ ನಾಡದೋಣಿಯಲ್ಲಿ ಸುಮಾರು 20 ಜನರಿದ್ದರು. ಕಪಿಲಾ ನದಿ ಮೂಲಕ ನೆರೆಯ ಕೇರಳದ ಚೆರಿ ಕಲ್ಲೂರು ಗ್ರಾಮಕ್ಕೆ ದೋಣಿ ತೆರಳುತ್ತಿದ್ದ ಸಂದರ್ಭದಲ್ಲಿ ಮಗುಚಿದೆ. ದೋಣಿಯಿಂದ ನದಿಗೆ ಜಿಗಿದ, 9ಮಂದಿ ಈಜಿಕೊಂಡು ದಡ ಸೇರಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X