ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಐಎಸ್ಸಿ ದಾಳಿ : ಚಿಂತಾಮಣಿಯ ಇಬ್ಬರು ಶಂಕಿತರ ಬಂಧನ

By Staff
|
Google Oneindia Kannada News

ಐಐಎಸ್ಸಿ ದಾಳಿ : ಚಿಂತಾಮಣಿಯ ಇಬ್ಬರು ಶಂಕಿತರ ಬಂಧನ
ಬಂಧಿತ ಆರೋಪಿಗಳಿಂದ ಮಹತ್ವದ ಮಾಹಿತಿ, ತನಿಖೆ ಮುಂದುವರಿಕೆ

ಬೆಂಗಳೂರು : ಭಾರತೀಯ ವಿಜ್ಞಾನ ಮಂದಿರದ ಮೇಲಿನ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನಿಜಾಮುದ್ದೀನ್‌ ಅಲಿಯಾಸ್‌ ಮುನ್ನ(24) ಮತ್ತು ಎಂ. ನೂರುಲ್ಲಾ ಖಾನ್‌(25) ಎಂಬ ವ್ಯಕ್ತಿಗಳನ್ನು ನಗರದ ಹೊರವಲಯದ ಹೆಸರಘಟ್ಟದಲ್ಲಿ ಭಾನುವಾರ ಬಂಧಿಸಿರುವುದಾಗಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಕೋಲಾರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಈ ಇಬ್ಬರೂ ಸೇರಿದಂತೆ, ಈವರೆಗೆ ಆರುಮಂದಿಯನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಉಗ್ರಗಾಮಿ ಚಟುವಟಿಕೆಯಲ್ಲಿ ಪಾಲ್ಗೊಂಡ ಹಿನ್ನೆಲೆ ಇವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಲೆಕ್ಟ್ರಿಕ್‌ ಕೆಲಸ ಮಾಡುವ ನಿಜಾಮುದ್ದೀನ್‌ ಮತ್ತು ಆಟೋ ಚಾಲಕ ನೂರುಲ್ಲಾ ಖಾನ್‌ರಿಂದ ಮಹತ್ವದ ಸಂಗತಿಗಳು ಹೊರಬಿದ್ದಿವೆ. ಈ ಇಬ್ಬರಿಂದ ಎರಡು ಟಿನ್‌ ಬಾಂಬ್‌, ಒಂದು ಟಿಫಿನ್‌ ಕ್ಯಾರಿಯರ್‌ ಬಾಂಬ್‌, ನಾಡಪಿಸ್ತೂಲ್‌ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X