ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರಂಗೆ ಕಸಿವಿಸಿ : ಕುಮಾರನ ತಾಳಕ್ಕೆ ದೇವೇಗೌಡರ ಮೇಳ

By Staff
|
Google Oneindia Kannada News

ಧರಂಗೆ ಕಸಿವಿಸಿ : ಕುಮಾರನ ತಾಳಕ್ಕೆ ದೇವೇಗೌಡರ ಮೇಳ
ಸೋನಿಯಾರಿಂದ ನನಗೆ ಅಧಿಕೃತ ಕರೆ ತಲುಪಿಲ್ಲ - ದೇವೇಗೌಡ

ಬೆಂಗಳೂರು : ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದ ಪ್ರಧಾನಿ ಎಚ್‌.ಡಿ.ದೇವೇಗೌಡ ಮತ್ತು ಪುತ್ರ ಎಚ್‌.ಡಿ.ಕುಮಾರಸ್ವಾಮಿ ಅವರ ಭೇಟಿ ಸೋಮವಾರ ನಡೆದಿದ್ದು, ಮುಖ್ಯಮಂತ್ರಿ ಗದ್ದುಗೆಯೆಡೆಗಿನ ಹಾದಿ ಸುಗಮವಾದಂತಾಗಿದೆ.

ಸದ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ ದೇವೇಗೌಡರು, ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ, ನನ್ನ ಪುತ್ರ ಕುಮಾರಸ್ವಾಮಿ ಜೆಡಿಎಸ್‌ ಪಕ್ಷವನ್ನು ನೂರಕ್ಕೆ ನೂರರಷ್ಟು ರಕ್ಷಿಸುತ್ತಾನೆ ಎನ್ನುವ ಬಗೆಗೆ ವಿಶ್ವಾಸವಿದೆ ಎಂದರು.

ಜೆಡಿಎಸ್‌ ಶಾಸಕರ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದು ಕುಮಾರಸ್ವಾಮಿ ನನಗೆ ತಿಳಿಸಿದ್ದಾನೆ ಎಂದ ದೇವೇಗೌಡ, ಜೆಡಿಎಸ್‌ ಒಡೆಯುವ ಪ್ರಯತ್ನಗಳು ಫಲಕಾರಿಯಾಗುವುದಿಲ್ಲ ಎಂದು ಕಾಂಗ್ರೆಸ್‌ ಹೆಸರು ಪ್ರಸ್ತಾಪಿಸದೇ, ತಮ್ಮ ವಿರೋಧಿಗಳನ್ನು ಟೀಕಿಸಿದರು.

ಸದ್ಯದ ಬಿಕ್ಕಟ್ಟನ್ನು ಚರ್ಚಿಸಲು ಸೋನಿಯಾ ಗಾಂಧಿಯಿಂದ ನನಗೆ ಯಾವುದು ಅಧಿಕೃತ ಕರೆ ಬಂದಿಲ್ಲ ಎಂದು ದೇವೇಗೌಡ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಗೌಡರ ಮತ್ತೊಬ್ಬಪುತ್ರ ಬಾಲಕೃಷ್ಣೇಗೌಡರ ನಿವಾಸದಲ್ಲಿ ಸಭೆ ನಡೆಯಿತು. ಹೆಲಿಕಾಪ್ಟರ್‌ನಲ್ಲಿ ನಗರಕ್ಕೆ ಕುಮಾರಸ್ವಾಮಿ ಆಗಮಿಸಿದ್ದರು. ಸಭೆ ನಂತರ ತಮ್ಮ ಬೆಂಬಲಿತ ಜೆಡಿಎಸ್‌ ಶಾಸಕರನ್ನು ಕಾಣಲು, ಗೋವಾಕ್ಕೆ ಮತ್ತೆ ತೆರಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಮ್ಮ ತಂದೆಗೆ ಸದ್ಯದ ಪರಿಸ್ಥಿತಿ ವಿವರಿಸಿದ್ದೇನೆ ಎಂದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X