ಪ್ರೇಮ್ಜಿ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ಅಸಿಂಧು
ಪ್ರೇಮ್ಜಿ
ವಿರುದ್ಧದ
ಕ್ರಿಮಿನಲ್
ಮೊಕದ್ದಮೆ
ಅಸಿಂಧು
ವಿಪ್ರೋ
ವಿರುದ್ಧ
ಆರ್.ಕೆ.ರಾಜ್ರಿಂದ
ಕಾನೂನು
ಹೋರಾಟ
ಪ್ರೇಮ್ಜಿ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೋಹನ್ ಶಾಂತನಗೌಡರ್, ಈ ಪ್ರಕರಣದಲ್ಲಿ ಗುರುತರ ಅಪರಾಧ ಕಂಡುಬರುತಿಲ್ಲ. ಹೀಗಾಗಿ ಅನಗತ್ಯ ಕ್ರಮಗಳು ಬೇಡ ಎಂದು ತಮ್ಮ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಹಿನ್ನೆಲೆ : ಆರ್.ಕೆ.ರಾಜ್ ಎಂಬಾತ ನೀಡಿರುವ ದೂರಿನ ಹಿನ್ನೆಲೆ ವಿಚಾರಣೆ ನಡೆಯುತ್ತಿದೆ. ವರ್ತೂರು ಹೋಬಳಿಯ ಚಲಘಟ್ಟದಲ್ಲಿನ ಭೂಪ್ರದೇಶ ಅಭಿವೃದ್ಧಿ ಅಥವಾ ಮಾರಾಟಕ್ಕೆ ಸಂಬಂಧಿಸಿದಂತೆ ವಿಪ್ರೋ, ರಾಜು ಜೊತೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ನಂತರದ ದಿನಗಳಲ್ಲಿ ಒಪ್ಪಂದ ಕಾರ್ಯರೂಪಕ್ಕೆ ಬರಲಿಲ್ಲ.
ಈ ಬೆಳವಣಿಗೆಯಿಂದ ದಾಖಲೆಗಳನ್ನು ಹಿಂದಿರುಗಿಸಲು ಕೋರಿದರೂ, ವಿಪ್ರೋ ಗಮನ ಹರಿಸಿಲ್ಲ ಎಂಬ ದೂರು ಆರ್.ಕೆ.ರಾಜ್ ಅವರದು. ಅಲ್ಲದೇ ಸುಲಿಗೆ, ವಂಚನೆ, ಅಪರಾಧಿಕ ಭಯೋತ್ಪಾದನೆ ಪ್ರಕರಣಗಳನ್ನು ಪ್ರೇಮ್ಜಿ ಸೇರಿದಂತೆ ಮೂವರ ವಿರುದ್ಧ ರಾಜ್ ದಾಖಲಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಐಟಿ - ಬಿಟಿ