ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರಂ ಸಂಪುಟಕ್ಕೆ 8ಜೆಡಿಎಸ್‌ ಸಚಿವರ ರಾಜೀನಾಮೆ

By Staff
|
Google Oneindia Kannada News

ಧರಂ ಸಂಪುಟಕ್ಕೆ 8ಜೆಡಿಎಸ್‌ ಸಚಿವರ ರಾಜೀನಾಮೆ
ಕುಮಾರಣ್ಣನ ಮುಂದೆ ನಿಷ್ಠೆ ಪ್ರದರ್ಶನ, ಸರ್ಕಾರಿ ಸೌಲತ್ತುಗಳ ಬಳಕೆಗೆ ಪೂರ್ಣವಿರಾಮ!

ಬೆಂಗಳೂರು : ಚಲುವರಾಯಸ್ವಾಮಿ, ಚೆನ್ನಿಗಪ್ಪ, ಬಿ.ಸತ್ಯನಾರಾಯಣ ಸೇರಿದಂತೆ ಎಂಟು ಮಂದಿ ಜೆಡಿಎಸ್‌ ಸಚಿವರು, ತಮ್ಮ ಖಾತೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ತಮಗೆ ನೀಡಲಾಗಿದ್ದ ಸರ್ಕಾರಿ ಸೌಕರ್ಯಗಳನ್ನು ಈ ಸಚಿವರುಗಳು, ಬಳಸುತ್ತಿಲ್ಲ. ಸಮ್ಮಿಶ್ರ ಸರ್ಕಾರಕ್ಕೆ ಜೆಡಿಎಸ್‌ ನೀಡಿದ್ದ ಬೆಂಬಲವನ್ನು ವಾಪಸ್‌ ಪಡೆದ ಹಿನ್ನೆಲೆಯಲ್ಲಿ, ಈ ಬೆಳವಣಿಗೆ ನಡೆದಿದೆ.

ಚಲುವರಾಯಸ್ವಾಮಿ, ಚೆನ್ನಿಗಪ್ಪ, ಆಲಂಗೂರು ಶ್ರೀನಿವಾಸ್‌, ಇಕ್ಬಾಲ್‌ ಅನ್ಸಾರಿ, ಹೊರಟ್ಟಿ, ಡಿ.ಟಿ.ಜಯಕುಮಾರ್‌, ಅಮರೇಗೌಡ ಬಯ್ಯಾಪುರ, ಬಿ.ಸತ್ಯನಾರಾಯಣ ರಾಜೀನಾಮೆ ಸಲ್ಲಿಸಿ, ಕುಮಾರ್‌ಸ್ವಾಮಿಗೆ ತಮ್ಮ ನಿಷ್ಠೆಯನ್ನು ಪ್ರದರ್ಶಿಸಿದ್ದಾರೆ.

ಜೆಡಿಎಸ್‌ನ ಇನ್ನುಳಿದ ಸಚಿವರಾದ ಎಂ.ಪಿ.ಪ್ರಕಾಶ್‌, ಪಿ.ಜಿ.ಆರ್‌.ಸಿಂಧ್ಯ, ಡಿ.ಮಂಜುನಾಥ್‌, ಮೆರಾಜುದ್ದೀನ್‌ ಪಟೇಲ್‌, ಎಚ್‌. ಎಸ್‌.ಮಹಾದೇವ್‌ ಪ್ರಸಾದ್‌, ಎಚ್‌.ಡಿ.ರೇವಣ್ಣ ಆಡಳಿತದಲ್ಲಿ ಮುಂದುವರೆದಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X