ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌಡರ ಪಾಳಯದಲ್ಲಿ ಗೊಂದಲ, ಸಮಾವೇಶ ಮುಂದಕ್ಕೆ

By Staff
|
Google Oneindia Kannada News

ಗೌಡರ ಪಾಳಯದಲ್ಲಿ ಗೊಂದಲ, ಸಮಾವೇಶ ಮುಂದಕ್ಕೆ
ನಮ್ಮ ನಿರ್ಣಯದಿಂದ ಹಿಂದೆ ಸರಿಯುವ ಮಾತೇ ಇಲ್ಲ : ಕುಮಾರಸ್ವಾಮಿ ಹೇಳಿಕೆ

ಬೆಂಗಳೂರು : ಜ.23ರಂದು ಆಯೋಜಿಸಿಲಾಗಿದ್ದ ಜಾತ್ಯತೀತ ಜನತಾದಳ ಕಾರ್ಯಕರ್ತರ ಸಮಾವೇಶವನ್ನು, ಮುಂದೂಡಲಾಗಿದೆ.

ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡುತ್ತಿದ್ದ ಜೆಡಿಎಸ್‌ ಕಾರ್ಯದರ್ಶಿ ವೈ.ಎಸ್‌.ವಿ.ದತ್ತ, ಮುಂದಿನ ಹೊಸ ದಿನಾಂಕಗಳನ್ನು ಸದ್ಯದಲ್ಲಿಯೇ ಪ್ರಕಟಿಸುವುದಾಗಿ ಹೇಳಿದರು.

ಹೊಸದಾಗಿ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗೆ ಆಯ್ಕೆಗೊಂಡ ಜೆಡಿಎಸ್‌ ಸದಸ್ಯರನ್ನು ಅಭಿನಂದಿಸಲು, ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಏರ್ಪಡಿಸಲಾಗಿದ್ದ, ಈ ಸಮಾವೇಶ ಕುಮಾರಸ್ವಾಮಿ ಅವರ ಬಂಡಾಯದ ಪರಿಣಾಮ ಮುಂದೂಡಲ್ಪಟ್ಟಿದೆ ಎನ್ನಲಾಗಿದೆ.

ದೇವೇಗೌಡ ಬೆಂಬಲಿಗರ ಸಭೆ ವಿಫಲ : ಜೆಡಿಎಸ್‌ನಲ್ಲಿ ಕುಮಾರಸ್ವಾಮಿಯಿಂದ ಉದ್ಭವಿಸಿರುವ ಬಿಕ್ಕಟ್ಟಿನ ಹಿನ್ನೆಲೆ ಇಂದು ನಡೆಸಲಾದ ಸಭೆ, ಪರಿಹಾರೋಪಾಯಗಳನ್ನು ಕಂಡು ಹಿಡಿಯುವಲ್ಲಿ ವಿಫವಾಗಿದೆ.

ಸಭೆಯಲ್ಲಿ ಸಚಿವರಾದ ಎಂ.ಪಿ.ಪ್ರಕಾಶ್‌, ಪಿ.ಜಿ.ಆರ್‌.ಸಿಂಧ್ಯ, ಎಂ.ರಾಜಶೇಖರ್‌ ಮೂರ್ತಿ, ಡಿ.ಮಂಜುನಾಥ್‌ ಮತ್ತಿತರರು ಎರಡು ಗಂಟೆಗೂ ಅಧಿಕ ಕಾಲ ಸದ್ಯದ ಬಿಕ್ಕಟ್ಟಿನ ಬಗ್ಗೆ ಚರ್ಚಿಸಿದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಪಿ.ಪ್ರಕಾಶ್‌, ಮೂರು ಆಯ್ಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಆದರೆ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ ಎಂದರು.

ಕಾಂಗ್ರೆಸ್‌ಗೆ ಬೆಂಬಲ ಮುಂದುವರೆಸುವುದು, ಪರ್ಯಾಯ ಸರ್ಕಾರ ರಚನೆಗೆ ಯತ್ನ ನಡೆಸುವುದು ಅಥವಾ ವಿಧಾನಸಭಾ ಚುನಾವಣೆಗೆ ತೆರಳುವ ಬಗೆಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X