ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗನನ್ನು ಸಿಎಂ ಮಾಡಲು ಅಪ್ಪನ ನಾಟಕ - ಸಿದ್ದರಾಮಯ್ಯ

By Staff
|
Google Oneindia Kannada News

ಮಗನನ್ನು ಸಿಎಂ ಮಾಡಲು ಅಪ್ಪನ ನಾಟಕ - ಸಿದ್ದರಾಮಯ್ಯ
ರಾಷ್ಟ್ರಪತಿ ಆಡಳಿತಕ್ಕೆ ಕಾಂಗ್ರೆಸ್‌ ಮುಖಂಡ ವಿಶ್ವನಾಥ್‌ ಆಗ್ರಹ

ಬೆಂಗಳೂರು : ಎಲ್ಲವೂ ದೇವೇಗೌಡರ ನಾಟಕ. ಇದು ತಮ್ಮ ಪುತ್ರ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತರಲು ನಡೆಸುತ್ತಿರುವ ಹುನ್ನಾರ ಎಂದು ಎಬಿಪಿಜೆಡಿ ಮುಖಂಡ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ದೇವೇಗೌಡರನ್ನು ನಂಬಿದವರಿಗೆ ಸಂಕಷ್ಟ ತಪ್ಪದು ಎಂಬುದು ಎಂ.ಪಿ.ಪ್ರಕಾಶ್‌ ಮತ್ತು ಸಿಂಧ್ಯಾಗೆ ಈಗಲಾದರೂ ಅರಿವಾಗಿರಬಹುದು ಎಂದರು.

ಪುತ್ರವಾತ್ಸಲ್ಯದಿಂದ ರಾಜ್ಯರಾಜಕಾರಣವನ್ನು ದೇವೇಗೌಡರು ಹೊಲಸೆಬ್ಬಿಸಿದ್ದಾರೆ. ಅವರಿಗೆ ಪಕ್ಷದ ಬಗ್ಗೆ ಪ್ರೀತಿಯಿದ್ದರೆ, ಈ ಕೂಡಲೇ ಪಕ್ಷದ್ರೋಹವೆಸಗಿರುವ ತಮ್ಮ ಪುತ್ರ ಕುಮಾರಸ್ವಾಮಿಯನ್ನು ಪಕ್ಷದಿಂದ ಉಚ್ಚಾಟಿಸಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

ರಾಷ್ಟ್ರಪತಿ ಆಡಳಿತಕ್ಕೆ ಆಗ್ರಹ : ಸದ್ಯದ ಸ್ಥಿತಿಯಲ್ಲಿ ರಾಷ್ಟ್ರಪತಿ ಆಡಳಿತವನ್ನು ಘೋಷಿಸಬೇಕೆಂದು ಕಾಂಗ್ರೆಸ್‌ ಮುಖಂಡ ಮತ್ತು ಮಾಜಿ ಸಚಿವ ಎಚ್‌.ವಿಶ್ವನಾಥ್‌ ಆಗ್ರಹಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X