ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌಡ, ಬಂಗಾರಪ್ಪ ಫೋನಿಗೆ ಕಾಂಗ್ರೆಸ್‌ ಕಿವಿ : ಆರೋಪ

By Staff
|
Google Oneindia Kannada News

ಗೌಡ, ಬಂಗಾರಪ್ಪ ಫೋನಿಗೆ ಕಾಂಗ್ರೆಸ್‌ ಕಿವಿ : ಆರೋಪ
ಏಪ್ರಿಲ್‌ನಲ್ಲಿ ಚುನಾವಣೆ ಖಚಿತ, ಆಗ ತೋರಿಸುತ್ತೇನೆ ನನ್ನ ತಾಕತ್ತು -ಎಸ್‌.ಬಂಗಾರಪ್ಪ

ಬೆಂಗಳೂರು : ಟೆಲಿಫೋನ್‌ ಕದ್ದಾಲಿಕೆ ರಾಜ್ಯದಲ್ಲೂ ನಡೆಯುತ್ತಿದೆ. ಆದು ಕಾಂಗ್ರೆಸ್‌ ಪಕ್ಷದ ಕಸುಬು ಎಂದು ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ದೂರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆದಿರುವ ಮತ್ತು ನಡೆಯುತ್ತಿರುವ ದೂರವಾಣಿ ಕದ್ದಾಲಿಕೆ ಪ್ರಕರಣಗಳನ್ನು ಸದ್ಯದಲ್ಲಿಯೇ ಸಾಕ್ಷಿ ಸಮೇತ ಪ್ರಕಟಿಸುತ್ತೇನೆ ಎಂದರು.

ನನ್ನ ಪೋನ್‌ ಮಾತ್ರವಲ್ಲ ದೇವೇಗೌಡ ಮತ್ತು ಬಿಜೆಪಿ ಮುಖಂಡರ ದೂರವಾಣಿ ಕರೆಗಳನ್ನು ಕಾಂಗ್ರೆಸ್‌ ಕದ್ದು ಕೇಳುತ್ತಿದೆ. ಈ ಹೀನ ಸಂಸ್ಕೃತಿ ಖಂಡನೀಯ ಎಂದು ಬಂಗಾರಪ್ಪ ಹೇಳಿದರು.

ದೇವೇಗೌಡ ಮತ್ತು ಕಾಂಗ್ರೆಸ್‌ ನಡುವೆ ಏನೇ ಮನಸ್ತಾಪ ಬಂದರೂ, ಸರ್ಕಾರ ಇನ್ನೆರಡು ತಿಂಗಳು ಬೀಳುವುದಿಲ್ಲ. ಏಪ್ರಿಲ್‌ನಲ್ಲಿ ವಿಧಾನಸಭೆ ಚುನಾವಣೆ ಖಚಿತ ಎಂದು ಭವಿಷ್ಯ ನುಡಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X