ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷದ ಕನ್ನಡಿಗ ವೆಂಕಟಾಚಲರಿಗೆ ನೈತಿಕ ಬೆಂಬಲ

By Staff
|
Google Oneindia Kannada News

ವರ್ಷದ ಕನ್ನಡಿಗ ವೆಂಕಟಾಚಲರಿಗೆ ನೈತಿಕ ಬೆಂಬಲ
ಅನ್ಯಾಯ ನೋಡಿ ಸುಮ್ಮನಿರಲಾರೆ, ಕನ್ನಡ ಕೆಲಸಕ್ಕೆ ಸದಾ ಸಿದ್ಧ -ವೆಂಕಟಾಚಲ

ದಾವಣಗೆರೆ : ಬಡವರ ಸಮಸ್ಯೆ ನೋಡಿದರೆ ನನಗೆ ದುಃಖವಾಗುತ್ತದೆ. ಅನ್ಯಾಯ ನೋಡಿ ಸುಮ್ಮನಿರಲು ನನ್ನಿಂದ ಸಾಧ್ಯವೇ ಇಲ್ಲ. ಎಷ್ಟೇ ಕಷ್ಟ ಬಂದರೂ ನನ್ನ ಕೆಲಸ ಮುಂದುವರೆಸುತ್ತೇನೆ ಎಂದು ಲೋಕಾಯುಕ್ತ ವೆಂಕಟಾಚಲ ಘೋಷಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ, ಈಟಿವಿ ವರ್ಷದ ಕನ್ನಡಿಗ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ಉಪಲೋಕಾಯುಕ್ತರಿಂದ ನನ್ನ ಕೆಲಸಕ್ಕೆ ತೊಡಕಾಗಿದೆ ಎಂದು ಸೂಚ್ಯವಾಗಿ ಹೇಳಿದ ಅವರು, ಮಿತಿಗಳ ನಡುವೆಯೇ ಭ್ರಷ್ಟರಿಗೆ ಪಾಠ ಕಲಿಸುತ್ತೇನೆ ಎಂದರು.

ಭಾರೀ ಕರತಾಡನ-ಜೈಕಾರಗಳ ಮಧ್ಯೆ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್‌, ವೆಂಕಟಾಚಲರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ನಂತರ ನಡೆದ ಮನರಂಜನಾ ಕಾರ್ಯಕ್ರಮದಲ್ಲಿ ಎಸ್‌.ಪಿ. ಬಾಲಸುಬ್ರಹ್ಮಣ್ಯಂ, ಶಂಕರ್‌ ಮಹಾದೇವನ್‌, ಸಿ. ಅಶ್ವಥ್‌, ಸಂಗೀತಾ ಕಟ್ಟಿ ಮತ್ತಿತರ ಗಾಯಕರು ತಮ್ಮ ಗಾನಸಿರಿಯಿಂದ ಮೋಡಿ ಮಾಡಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X