ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಡಾ.ಎಸ್. ಎಲ್. ಭೈರಪ್ಪ ಅವರಿಗೊಲಿದ ಪಂಪ ಪ್ರಶಸ್ತಿ
ಡಾ.ಎಸ್.
ಎಲ್.
ಭೈರಪ್ಪ
ಅವರಿಗೊಲಿದ
ಪಂಪ
ಪ್ರಶಸ್ತಿ
ತಜ್ಞ
ಕಾದಂಬರಿಕಾರನಿಗೆ
ಮನ್ನಣೆ,
ಕದಂಬೋತ್ಸವದಲ್ಲಿ
ಪ್ರಶಸ್ತಿ
ಪ್ರದಾನ...
ಸೃಜನಶೀಲ ಸಾಹಿತ್ಯ ಕ್ಷೇತ್ರದಲ್ಲಿನ ಅವರ ಅಪೂರ್ವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಹಿಂದೆ 17ಜನ ಗಣ್ಯರು ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪ್ರಶಸ್ತಿ ಒಂದು ಲಕ್ಷ ರೂಪಾಯಿ ನಗದು, ತಾಮ್ರ ಫಲಕ, ಪುತ್ಥಳಿಗಳನ್ನು ಒಳಗೊಂಡಿದೆ.
ಕಾದಂಬರಿ ಪ್ರಕಾರದಲ್ಲಿ ವಿಶಿಷ್ಟ ಸಾಧನೆ ಮೆರೆದಿರುವ ಅವರು ತತ್ವಶಾಸ್ತ್ರದ ವಿದ್ಯಾರ್ಥಿ. ಮೈಸೂರಿನ ಪ್ರಾದೇಶಿಕ ಶಿಕ್ಷಣ ವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ದುಡಿದಿದ್ದಾರೆ. ಅವರ ಕಾದಂಬರಿಗಳು ಹಲವು ಭಾಷೆಗಳಿಗೆ ಭಾಷಾಂತರಗೊಂಡಿವೆ. ಅಲ್ಲದೆ ಚಲನಚಿತ್ರ-ಧಾರಾವಾಹಿಗಳಾಗಿ ಮೂಡಿಬಂದಿವೆ.
ಜನವರಿ 20ರಂದು ಬನವಾಸಿಯಲ್ಲಿ ನಡೆಯುವ ಕದಂಬೋತ್ಸವದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Wednesday, January 11, 2006, 23:53 [IST]